ಹೈದರಾಬಾದ್: ಕುಡಿದ ಮತ್ತಿನಲ್ಲಿ ತಂದೆ ಬ್ಲೇಡಿನಿಂದ 5 ವರ್ಷದ ಮಗಳ ಕಣ್ಣಿಗೆ ಗಾಯಗೊಳಿಸಿದ ಘಟನೆ ಹೈದರಾಬಾದಿನಲ್ಲಿ ಮೊನ್ನೆ ಸೋಮವಾರ ರಾತ್ರಿ ನಡೆದಿದೆ. ನಿನ್ನೆ ಮಗುವಿನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಲಗಣ್ಣಿಗೆ ಗಾಯಗಳಾಗಿ ಬಾಲಕಿ ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಎಲ್ ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಲಕ್ಷ್ಮಯ್ಯ ಮತ್ತು ನರಸಮ್ಮ ದಿನಗೂಲಿ ನೌಕರರಾಗಿದ್ದು ತಮ್ಮ 5 ವರ್ಷದ ಮಗುವಿನೊಂದಿಗೆ ಮಾದಾಪುರದ ಪಾರ್ವತ್ ನಗರದಲ್ಲಿ ವಾಸವಾಗಿದ್ದರು. ಮೊನ್ನೆ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಮನೆಯ ಕೆಳಗೆ ದಂಪತಿ ಆಶ್ರಯ ಪಡೆದಿದ್ದರು. ಮದ್ಯ ಸೇವಿಸಿದ ಲಕ್ಷ್ಮಯ್ಯ ಪತ್ನಿ ಮತ್ತು ಮಗುವಿನ ಮೇಲೆ ಕ್ರೂರವಾಗಿ ನಡೆದುಕೊಳ್ಳಲು ಆರಂಭಿಸಿದ. ನರಸಮ್ಮ ಮಗಳನ್ನು ಎತ್ತಿಕೊಂಡು ಹೊರ ನಡೆಯಲು ಯತ್ನಿಸಿದಾಗ ಆತ ಮತ್ತಷ್ಟು ಕುಪಿತನಾಗಿ ಮಗಳನ್ನು ಹಿಡಿದುಕೊಂಡನು. ಮಗುವಿನ ಬಲಗಣ್ಣಿಗೆ ಬ್ಲೇಡ್ ನಿಂದ ಗಾಯ ಮಾಡಿ ಅಲ್ಲಿಂದ ಓಡಿ ಹೋದನು. ನರಸಮ್ಮ ಅಸಹಾಯಕಳಾಗಿ ತನ್ನ ಮನೆಗೆ ವಾಪಸಾದಳು.
ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ಭಾರತೀಯ ದಂಡ ಸಂಹಿತೆಯ 324ನೇ ಸೆಕ್ಷನ್ ನಡಿಯಲ್ಲಿ ಕೇಸು ದಾಖಲಿಸಿ ಲಕ್ಷ್ಮಯ್ಯನನ್ನು ಬಂಧಿಸಲಾಗಿದೆ ಎಂದು ಮಾದಾಪುರ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos