ಶ್ರೀನಗರ: ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ನೆರವು ನೀಡಿದ ಆರೋಪದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಮೂವರನ್ನು ಶೋಪಿಯಾನ್ ನಲ್ಲಿ ಬಂಧಿಸಲಾಗಿದೆ.
ಬಂಧಿತರ ಪೈಕಿ ಅದೀಲ್ ಅಹಮದ್ ನಿಗ್ರೂ ಸಹ ಒಬ್ಬನಾಗಿದ್ದು ಇತ ಉಗ್ರ ಚಟುವಟಿಕೆಯ ತಳಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ನಿಗ್ರೂನನ್ನು ತೀವ್ರ ವಿಚಾರಣೆ ನಡೆಸಿದಾಗ ಆತ ಆಶಿಂಪೋರಾದ ಕಾನ್ಸ್ ಟೇಬಲ್ ಶಬೀರ್ ಅಹಮದ್ ಮಲೀಕ್ ನಿಂದ ಒಂದು ಎಕೆ 47 ಹಾಗೂ 40 ಸಜೀವ ಗುಂಡು ಇನ್ನೊಬ್ಬ ಕಾನ್ಸ್ ಟೇಬಲ್ ನಾಜೀರ್ ಅಹಮದ್ ನಾಜರ್ ನಿಂದ ಸಹ ಒಂದು ಎಕೆ 47 ಹಾಗೂ 40 ಸಜೀವ ಗುಂಡುಗಳನ್ನು ಪಡೆದಿರುವುದಾಗಿ ಹೇಳಿದ್ದಾನೆ.
ಅದೀಲ್ ಅಹಮದ್ ನಿಗ್ರೂ ಹೇಳಿಕೆ ಹಿನ್ನೆಲೆಯಲ್ಲಿ ಪೊಲೀಸರು ಶಬೀರ್ ಅಹಮದ್ ಮಲೀಕ್ ಹಾಗೂ ನಾಜೀರ್ ಅಹಮದ್ ನಾಜರ್ ನನ್ನು ಬಂಧಿಸಿದ್ದಾರೆ. ಬಂಧತ ನಿಗ್ರೂನಿಂದ ಒಂದು ಎಕೆ 47 ಹಾಗೂ 20 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತ ಇಬ್ಬರು ಕಾನ್ಸ್ ಟೇಬಲ್ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos