ಸಂಗ್ರಹ ಚಿತ್ರ 
ದೇಶ

ಇಬ್ಬರು ಪಾಕ್ ನಾಗರೀಕರಿಗೆ ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾ ಮಂಜೂರು!

ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಇಬ್ಬರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.

ನವದೆಹಲಿ: ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಇಬ್ಬರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.
ವೈದ್ಯಕೀಯ ವೀಸಾಗಾಗಿ ಮನವಿ ಮಾಡಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಖಾತೆಗೆ ಸರಣಿ ಟ್ವೀಟ್ ಗಳು ಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಸುಷ್ಮಾ ಸ್ವರಾಜ್ ಅವರು ಅರ್ಹರಿಗೆ ವೈದ್ಯಕೀಯ  ವೀಸಾ ಮಂಜೂರು ಮಾಡುತ್ತಿದ್ದಾರೆ. ಅದರಂತೆ ಇದೀಗ ಮತ್ತಿಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡಲಾಗಿದ್ದು, ಮಗುವಿನ ಕಿಡ್ಮಿ ಕಸಿ ಶಸ್ತ್ರಚಿಕಿತ್ಸೆಗಾಗಿ ಮನವಿ ಮಾಡಿದ್ದ ತಂದೆಗೆ ಹಾಗೂ ಅನಾರೋಗ್ಯ ಪೀಡಿತ  ಹಿರಿಯ ನಾಗರಿಕರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡಿದ್ದಾರೆ. 
ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ದೀಪಾವಳಿ ಸಂದರ್ಭದಲ್ಲಿ ವೈದ್ಯಕೀಯ ವೀಸಾಗಿ ಮನವಿ ಮಾಡಿರುವ ಎಲ್ಲ ಅರ್ಹರಿಗೆ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡಲಿದೆ. ಇಸ್ಲಾಮಾಬಾದಿನಲ್ಲಿರುವ  ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಹೇಳಿದ್ದಾರೆ.
ಇನ್ನು ಪ್ರಸ್ತುತ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನದ ಕಾಶಿಫ್ ಎಂಬುವವರಿಗೆ ವೀಸಾ ಮಂಜೂರು ಮಾಡಿದ್ದು, ಕಾಶಿಫ್ ಅವರ ಅನಾರೋಗ್ಯ ಪೀಡಿತ ಮಗುವಿನ ಔಷಧಿಗಳು ಮುಗಿದಿತ್ತು. ಈ ಹಿನ್ನಲೆಯಲ್ಲಿ ತಮಗೆ ನೆರವಾಗುವಂತೆ  ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ, ನಿಮ್ಮ ಮಗು ಸುರಕ್ಷಿತವಾಗಿರುತ್ತಾನೆ. ಚಿಂತೆ ಬೇಡ ನಿಮಗೆ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡುತ್ತದೆ ಎಂದು ಭರವಸೆ  ನೀಡಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ ಕಿಡ್ಮಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ಮನವಿ ಮಾಡಿದ್ದ ಹಿರಿಯ ಮಹಿಳೆಯೊಬ್ಬರಿಗೂ ವೀಸಾ ಮಂಜೂರು ಮಾಡಲಾಗಿದ್ದು, ತಮ್ಮ ತಾಯಿಯ ಶಸ್ತ್ರ ಚಿಕಿತ್ಸೆಗೆ ಮನವಿ ಮಾಡಿದ್ದ ರಫೀಖ್ ಮೆಮೋನ್ ಎಂಬುವವರಿಗೆ  ವೀಸಾ ಮಂಜೂರು ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT