ಸನಾ ಇಕ್ಬಾಲ್ 
ದೇಶ

ಬೈಕ್‍ನಲ್ಲಿ ದೇಶ ಸುತ್ತಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ: ಸನಾ ತಾಯಿ

ಮಹಿಳಾ ಬೈಕರ್ ಎಂಬ ಖ್ಯಾತಿ ಗಳಿಸಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ ಎಂದು ಸನಾ ಇಕ್ಬಾಲ್ ತಾಯಿ ದೂರಿದ್ದಾರೆ...

ಹೈದರಾಬಾದ್: ಮಹಿಳಾ ಬೈಕರ್ ಎಂಬ ಖ್ಯಾತಿ ಗಳಿಸಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ ಎಂದು ಸನಾ ಇಕ್ಬಾಲ್ ತಾಯಿ ದೂರಿದ್ದಾರೆ. 
ಸನಾ ಇಕ್ಬಾಲ್ ಅಂತ್ಯಕ್ರಿಯೆ ನಂತರ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಸನಾ ಇಕ್ಬಾಲ್ ತಾಯಿ ಶಹೀನ್ ಖಾನ್ ಅವರು ನನ್ನ ಮಗಳು ಅಪಘಾತದಲ್ಲಿ ಮೃತಪಟ್ಟಿಲ್ಲ ಅವಳನ್ನು ಪೂರ್ವ ನಿಯೋಜಿತವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 
ನದೀಮ್ ಜತೆ ಸನಾ ಇಕ್ಬಾಲ್ ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ಪತಿ ನದೀಮ್ ಹಾಗೂ ಆತನ ತಾಯಿ ಹಣಕ್ಕಾಗಿ ಸನಾಳನ್ನು ಪೀಡಿಸುತ್ತಿದ್ದರು. ಸನಾ ಇಕ್ಬಾಲ್ ನದೀಮ್ ಜತೆ ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ ಸಂಸಾರ ಮಾಡಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದೇವು ಎಂದು ಹೇಳಿದ್ದಾರೆ. ಇನ್ನು ಸನಾ ಅಂತ್ಯಕ್ರಿಯೆಯಲ್ಲಿ ನದೀಮ್ ಕುಟುಂಬಸ್ಥರು ಯಾರು ಬಾರದೆ ಇರುವುದನ್ನು ಗುರುತಿಸಿರುವ ಶಹೀನಾ ಪತಿಯೇ ಪೂರ್ವ ನಿಯೋಜಿತವಾಗಿ ಸನಾಳನ್ನು ಕೊಲೆ ಮಾಡಿದ್ದು ಅದನ್ನು ಅಪಘಾತ ಎಂದು ತೋರಿಸಲು ಹೊರಟಿದ್ದಾರೆ. ನನ್ನ ಮಗಳ ಕೊಲೆಗೆ ನ್ಯಾಯ ಸಿಗುವ ಹೊರೆಗೂ ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ. 
ಸನಾ ಇಕ್ಬಾಲ್ ಸಾವಿಗೂ ಮುನ್ನ ಪತಿ ನದೀಮ್ ಮನೆಗೆ ಬಂದು ಆಕೆಯನ್ನು ಬಲವಂತವಾಗಿ ಹೊರಗಡೆ ಹೋಗಲು ಬರುವಂತೆ ಒತ್ತಾಯಿಸಿದ್ದ. ಇದಾದ ನಂತರ ಕಾರು ಅಪಘಾತಕ್ಕೀಡಾಗಿದ್ದು ಅಪಘಾತದಲ್ಲಿ ಸನಾ ಇಕ್ಬಾಲ್ ಸ್ಥಳದಲ್ಲೇ ಮೃತಪಟ್ಟಿದ್ದು ನದೀಮ್ ಸಣ್ಣ ಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸನಾಳನ್ನು ಕೊಲೆ ಮಾಡಲೆಂದೆ ನದೀಮ್ ಮನೆಗೆ ಬಂದು ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದ ಎಂದು ಶಹೀನಾ ಆರೋಪಿಸಿದ್ದು ಈ ಸಂಬಂಧ ನರ್ಸಂಗಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿರುವುದಾಗಿ ಹೇಳಿದ್ದಾರೆ. 
ತೊಲಿ ಚೌಕಿಯ ಅಲ್ ಹಸನ್ ಕಾಲೋನಿಯಲ್ಲಿ ಸನಾ ಇಕ್ಬಾಲ್ ಅವರನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು ಈ ವೇಳೆ ಅಪಾರ ಸಂಖ್ಯೆಯಲ್ಲಿ ಬೈಕ್ ಸವಾರರು, ಸ್ನೇಹಿತರು, ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ನಂತರ ಬಜಾರ್ ಗೇಟ್ ಪ್ರದೇಶದಲ್ಲಿದ್ದ ಚಿತಾಗಾರದಲ್ಲಿ ಆಕೆಯ ಅಂತ್ಯಸಂಸ್ಕಾರ ನಡೆಯಿತು. 
ಖಿನ್ನತೆ ಮತ್ತು ಆತ್ಮಹತ್ಯೆಯಂಥ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಜಾಗೃತಿ ಕಾರ್ಯಕ್ರಮ ನೀಡುವ ಸಲುವಾಗಿ ಸನಾ ಇಕ್ಬಾಲ್ 38 ಸಾವಿರ ಕಿ.ಮೀ ಬೈಕ್ ನಲ್ಲಿ ಸಂಚಾರ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT