ಗೀತಾ 
ದೇಶ

ನಾವೇ ಪೋಷಕರು ಎಂದಿದ್ದ ಜಾರ್ಖಾಂಡ್ ದಂಪತಿಗಳನ್ನು ಗುರ್ತಿಸದ ಗೀತಾ

14 ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದುಕೊಂಡು ಸಂಕಷ್ಟ ಎದುರಿಸಿ, ಕೊನೆಗೂ ತವರುನೆಲೆ ಭಾರತಕ್ಕೆ ಮರಳಿದ್ದ ಗೀತಾ ಪೋಷಕರು ಹುಡುಕಾಟ ತೀವ್ರಗೊಂಡಿದ್ದು, ಗೀತಾ ನಮ್ಮ ಪುತ್ರಿಯೇ ಎಂದು ಹೇಳಿಕೊಂಡು ಬಂದಿದ್ದ ಜಾರ್ಖಾಂಡ್...

ಇಂದೋರ್: 14 ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದುಕೊಂಡು ಸಂಕಷ್ಟ ಎದುರಿಸಿ, ಕೊನೆಗೂ ತವರುನೆಲೆ ಭಾರತಕ್ಕೆ ಮರಳಿದ್ದ ಗೀತಾ ಪೋಷಕರು ಹುಡುಕಾಟ ತೀವ್ರಗೊಂಡಿದ್ದು, ಗೀತಾ ನಮ್ಮ ಪುತ್ರಿಯೇ ಎಂದು ಹೇಳಿಕೊಂಡು ಬಂದಿದ್ದ ಜಾರ್ಖಾಂಡ್ ದಂಪತಿಗಳನ್ನು ಗುರ್ತಿಸುವಲ್ಲಿ ಗೀತಾ ವಿಫಲಳಾಗಿದ್ದಾಳೆ. 
ಕೆಲ ದಿನಗಳ ಹಿಂದಷ್ಟೇ ಜಾರ್ಖಾಂಡ್ ಮೂಲದ ಮಾಲಾ ದೇವಿ ಹಾಗೂ ವಿಜಯ್ ರಾಮ್ ಎಂಬ ದಂಪತಿಗಳು ಗೀತಾ ನಮ್ಮ ಪುತ್ರಿ ಎಂದು ಹೇಳಿದ್ದರು. ಇದರಂತೆ ನಿನ್ನೆ ದಂಪತಿಗಳು ಗೀತಾಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗೀತಾ ದಂಪತಿಗಳನ್ನು ಗುರ್ತಿಸುವಲ್ಲಿ ವಿಫಲಳಾಗಿದ್ದಾಳೆಂದು ತಿಳಿದುಬಂದಿದೆ. 
ಸಂಜ್ಞಾ ಭಾಷೆ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರು ಮಾತನಾಡಿ, ಗೀತಾಳನ್ನು ಭೇಟಿ ಮಾಡಲು ಬಂದಿದ್ದ ದಂಪತಿಗಳನ್ನು ಗೀತಾ ತನ್ನ ಪೋಷಕರಲ್ಲ ಎಂದು ಹೇಳಿದ್ದಳು ಎಂದು ಹೇಳಿದ್ದಾರೆ. 
ಕಲೆಕ್ಟರ್ ನಿಶಾಂಗ್ ವಾರ್ವಡೆ ಮಾತನಾಡಿ, ಸಂಜ್ಞಾ ಭಾಷೆ ನನಗೆ ಗೊತ್ತಿಲ್ಲ. ಗೀತಾ ತನ್ನ ಕುಟುಂಬವನ್ನು ಗುರ್ತಿಸುತ್ತಿರುವ ಕುರಿತು ನನಗೆ ಅರ್ಥವಾಗಲಿಲ್ಲ. ಇದೀಗ ಡಿಎನ್ಎ ಪರೀಕ್ಷೆ ಮಾಡಲಾಗುತ್ತಿದ್ದು, ಪರೀಕ್ಷೆ ಬಳಿಕವಷ್ಟೇ ಉತ್ತರ ಸಿಗಲಿದೆ. ದೆಹಲಿ ಪ್ರಯೋಗಾಲದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ವಾರದೊಳಗಾಗಿ ವರದಿ ಸಿಗಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT