ಪಿ ಚಿದಂಬರಂ 
ದೇಶ

ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ: ಚಿದಂಬರಂ

ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆ ಎಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ ಎಂದು ಮಾಜಿ ಗೃಹ ಚಿದಂಬರಂ ಹೇಳಿದ್ದಾರೆ.

ರಾಜ್ಕೋಟ್: ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆ ಎಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ ಎಂದು ಮಾಜಿ ಗೃಹ ಚಿದಂಬರಂ ಹೇಳಿದ್ದಾರೆ. 
ರಾಜಕೋಟ್ ನಲ್ಲಿ ಮಾತನಾಡಿರುವ ಚಿದಂಬರಂ, ಜಮ್ಮು-ಕಾಶ್ಮಿರದ ಜನತೆ ಆಜಾದಿ ಬಯಸುತ್ತಿದ್ದಾರೆ ಎಂದರೆ ಅದರ ಅರ್ಥ ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದಾರೆ ಎಂದು ನಾನು ಅಲ್ಲಿ ನಡೆಸಿದ ಸಂವಾದದಿಂದ ತಿಳಿಯಿತು. ಜಮ್ಮು-ಕಾಶ್ಮೀರದ ಜನತೆಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಬೇಕು ಹಾಗೂ ಕೆಲವು ಭಾಗಗಳಲ್ಲಿ ಸ್ವಾಯತ್ತತೆ ನೀಡಬೇಕಿದೆ ಎಂದು ಚಿದಂಬರಂ ಹೇಳಿದ್ದಾರೆ. 
ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಅಂಶವನ್ನು ಪರಿಗಣಿಸಬೇಕಿದೆ, ಹೀಗೆ ಮಾಡಿದರೂ ಸಹ ಜಮ್ಮು-ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯಲಿದೆ. ಆದರೆ ಆರ್ಟಿಕಲ್ 370 ರ ಅಡಿಯಲ್ಲಿ ಹೆಚ್ಚಿನ ಅಧಿಕಾರ ಸಿಗಲಿದೆಯಷ್ಟೇ ಎಂದು ಚಿದಂಬರಂ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

SCROLL FOR NEXT