ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು 
ದೇಶ

ರೊಹಿಂಗ್ಯಾ ವಲಸಿಗರ ಗಡಿಪಾರು ಪ್ರಕರಣ: ಭಾರತ ಕಾನೂನಾತ್ಮಕವಾಗಿ ನಡೆಯಲಿದೆ- ರಿಜಿಜು

ರೊಹಿಂಗ್ಯಾ ವಲಸಿಗರ ಗಡಿಪಾರು ಕುರಿತಂತೆ ಭಾರತ ಕಾನೂನಾತ್ಮಕವಾಗಿ ನಡೆಯಲಿದ್ದು, ವಲಸಿಗರನ್ನು ಗಡಿಪಾರು ಮಾಡಲು ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು...

ನವದೆಹಲಿ: ರೊಹಿಂಗ್ಯಾ ವಲಸಿಗರ ಗಡಿಪಾರು ಕುರಿತಂತೆ ಭಾರತ ಕಾನೂನಾತ್ಮಕವಾಗಿ ನಡೆಯಲಿದ್ದು, ವಲಸಿಗರನ್ನು ಗಡಿಪಾರು ಮಾಡಲು ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಹೇಳಿದ್ದಾರೆ. 
ರೊಹಿಂಗ್ಯಾ ವಲಸಿಗರ ಗಡಿಪಾರು ಪ್ರಕರಣ ಸಂಬಂಧ ಭಾರತದ ವಿರುದ್ಧ ಕೇಳಿ ಬರುತ್ತಿರುವ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದಂತೆ ಇತರೆ ಯಾವುದೇ ದೇಶಗಳು ವಲಸಿಗರನ್ನು ಸ್ವೀಕರಿಸುವುದಿಲ್ಲ. ವಲಸಿಗರನ್ನು ಗಡಿಪಾರುವ ಮಾಡುವಾಗ ಭಾರತ ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ. ಕಾನೂನಾತ್ಮಕವಾಗಿ ನಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. 
ರೊಹಿಂಗ್ಯಾ ವಲಸಿಗರ ವಿಚಾರದಲ್ಲಿ ಭಾರತ ಅಮಾನವೀಯವಾಗಿ ಹಾಗೂ ಅಸಹಿಷ್ಣುತೆಯಿಂದ ವರ್ತಿಸುತ್ತಿದೆ ಎಂದು ಯಾವುದೇ ದೇಶ ಆರೋಪಿಸುವಂತಿಲ್ಲ. ವಲಸಿಗರನ್ನು ಕಾನೂತ್ಮಕವಾಗಿಯೇ ಗಡಿಪಾರು ಮಾಡಲಾಗುತ್ತದೆ. ಸೇನಾಪಡೆಗಳನ್ನು ಬಳಸಿ ಯಾರೊಬ್ಬರನ್ನು ಹೊರಗೆ ಹಾಕುವುದಿಲ್ಲ. ಭಾರತವನ್ನು ಅಮಾನವೀಯ ದೇಶವೆಂದು ಆರೋಪಿಸುತ್ತಿರುವುದು ತಪ್ಪು. ಭಾರತದಂತೆ ವಲಸಿಗರನ್ನು ಇನ್ನಾವುದೇ ದೇಶ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ಮ್ಯಾನ್ಮಾರ್ ನಲ್ಲಿ ಬೌದ್ಧ ಧರ್ಮೀಯರಿಂದ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡ ನಡೆಯುತ್ತಿದ್ದು, ಮಕ್ಕಳು, ಮಹಿಳೆಯರು ಎನ್ನದೆಯೇ ಅಮಾನವೀಯವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 
ಈ ನಡುವೆ ರೊಹಿಂಗ್ಯಾ ಮುಸ್ಲಿಂ ವಲಸಿಗರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಮ್ಮನ್ನು ಮ್ಯಾನ್ಮಾರ್ ಗೆ ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT