ರಾಜನಾಥ್ ಸಿಂಗ್ 
ದೇಶ

ವಾಟ್ಸ್ ಆಪ್ ಸಂದೇಶಗಳನ್ನು ಪರಿಶೀಲಿಸದೇ ಫಾರ್ವಡ್ ಮಾಡಬೇಡಿ: ರಾಜನಾಥ್ ಸಿಂಗ್

ಕೆಲ ದೇಶ ವಿರೋಧಿ ವ್ಯಕ್ತಿಗಳು ಸಾಮಾಜಿಕ ತಾಣದಲ್ಲಿ ಪರಿಶೀಲಸಿದ ಮಾಹಿತಿಯನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ....

ನವದೆಹಲಿ: ಕೆಲ ದೇಶ ವಿರೋಧಿ ವ್ಯಕ್ತಿಗಳು ಸಾಮಾಜಿಕ ತಾಣದಲ್ಲಿ ಪರಿಶೀಲಸಿದ ಮಾಹಿತಿಯನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಲು ಯತ್ನಿಸುತ್ತಿದ್ದು, ಅದನ್ನು ನೀವು ನಂಬಬೇಡಿ ಮತ್ತು ಪರಿಶೀಲಿಸದೆ ಫಾರ್ವಡ್ ಮಾಡಬೇಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜನತೆಗೆ ಸೋಮವಾರ ಕರೆ ನೀಡಿದ್ದಾರೆ.
ವಾಟ್ಸ್ ಆಪ್ ನಂತಹ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಹಲವು ಸುದ್ದಿ ಮತ್ತು ಮಾಹಿತಿ ಸಂಪೂರ್ಣ ತಪ್ಪಾಗಿರುತ್ತದೆ ಅಥವಾ ಆಧಾರ ರಹಿತವಾಗಿರುತ್ತದೆ. ಆದರೂ ಇದನ್ನು ಪರಿಶೀಲಿಸದೆ ನಿತ್ಯ ಸರ್ಕೂಲೇಟ್ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಗುಪ್ತಚರ ಇಲಾಖೆಯ ಶಶಸ್ತ್ರ ಸೀಮಾ ಬಲ(ಎಸ್ಎಸ್ ಬಿ) ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಪರಿಶೀಲಿಸದೆ ಯಾವುದೇ ವಾಟ್ಸ್ ಆಪ್ ಸಂದೇಶವನ್ನು ನಂಬಬೇಡಿ ಮತ್ತು ಫಾರ್ವಡ್ ಮಾಡಬೇಡಿ ಎಂದು ನಾನು ಎಸ್ಎಸ್ ಬಿ ಯೋಧರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
1,751 ಕಿ.ಮೀ. ಭಾರತ-ನೇಪಾಳ್ ಹಾಗೂ 699 ಕಿ.ಮೀ ಉದ್ದದ ಭಾರತ-ಭೂತಾನ್ ಗಡಿ ರಕ್ಷಣೆಯಲ್ಲಿ ಎಸ್ಎಸ್ ಬಿ ಯೋಧರು ಮಹತ್ವ ಪಾತ್ರ ವಹಿಸುತ್ತಿದ್ದಾರೆ ಎಂದ ರಾಜನಾಥ್ ಸಿಂಗ್, ಅಂತಹ ತೆರೆದ ಗಡಿಗಳನ್ನು ಕಾಯುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT