ದೇಶ

ಗುರುಗ್ರಾಮ್ ವಿದ್ಯಾರ್ಥಿ ಕೊಲೆ ಪ್ರಕರಣ: ಬಸ್ ಕಂಡಕ್ಟರ್, ಶಾಲಾ ಸಿಬ್ಬಂದಿಗೆ ನ್ಯಾಯಾಂಗ ಬಂಧನ

Lingaraj Badiger
ಗುರುಗ್ರಾಮ್: ಗುರುಗ್ರಾಮದ ರಯಾನ್ ಇಂಟರ್ ನ್ಯಾಷನಲ್ ಶಾಲೆಯ 2ನೇ ತರಗತಿಯ ವಿದ್ಯಾರ್ಥಿ ಪ್ರಧ್ಯುಮಾನ್ ಥಾಕೂರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಶಾಲಾ ಬಸ್ ಕಂಡಕ್ಟರ್ ಹಾಗೂ ಇಬ್ಬರು ಶಾಲಾ ಸಿಬ್ಬಂದಿಯನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
ತೀವ್ರ ವಿಚಾರಣೆಯ ಬಳಿಕ ಪೊಲೀಸರು ಬಂಧಿತ ಆರೋಪಿಗಳಾದ ಕಂಡಕ್ಟರ್ ಅಶೋಕ್ ಕುಮಾರ್, ರಯಾನ್ ಇಂಟರ್ ನ್ಯಾಷನಲ್ ಗ್ರೂಪ್ ನ ಉತ್ತರ ವಲಯ ಮುಖ್ಯಸ್ಥ ಮತ್ತು ಎಚ್ ಆರ್ ಮುಖ್ಯಸ್ಥರನ್ನು ಇಂದು ಕೋರ್ಟ್ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಸೆಪ್ಟೆಂಬರ್ 29ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
7 ವರ್ಷದ ವಿದ್ಯಾರ್ಥಿ ಕೊಲೆಯಾಗಿ 10 ದಿನಗಳ ನಂತರ ಇಂದು ರಯಾನ್ ಇಂಟರ್ ನ್ಯಾಷನಲ್ ಶಾಲೆ ಪುನಾರಂಭವಾಗಿದೆ. ಆದರೆ ಪೋಷಕರಿಗೆ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಇನ್ನೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸೆಪ್ಟೆಂಬರ್ 8ರಂದು ಪ್ರಧ್ಯುಮಾನ್ ಥಾಕೂರ್ ನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ವಿದ್ಯಾರ್ಥಿಯ ಶವ ಶಾಲಾ ಶೌಚಾಲಯದಲ್ಲಿ ಪತ್ತೆಯಾಗಿತ್ತು.
SCROLL FOR NEXT