ರಜಿತ್ ಕುಮಾರ್ 
ದೇಶ

ಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹುಟ್ಟುತ್ತಿದ್ದಾರೆ: ಕೇರಳ ಶಿಕ್ಷಕ

ಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆಂದು ಕೇರಳ ಶಿಕ್ಷಕರೊಬ್ಬರು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದೆ...

ತಿರುವನಂತಪುರ; ಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆಂದು ಕೇರಳ ಶಿಕ್ಷಕರೊಬ್ಬರು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದೆ. 
ಕಾಲಡಿಯ ಸರ್ಕಾರಿ ಕಾಲೇಜ್ ವೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಜಿತ್ ಕುಮಾರ್ ಎಂಬುವವರು ಈ ರೀತಿಯ ಹೇಳಿಕೆ ನೀಡಿದ್ದು, ಶಿಕ್ಷಕನ ಈ ಹುಸಿ ವೈಜ್ಞಾನಿಕ ಮತ್ತು ಕಾಮಪ್ರಚೋದಕ ಹೇಳಿಕೆ  ಸಂಬಂಧ ಇದೀಗ ಕೇರಳ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. 
ಸಭೆಯೊಂದರಲ್ಲಿ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಏಕೆ ಜನಿಸುತ್ತಾರೆಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪೋಷಕರು ವಿರುದ್ಧ ವರ್ತನೆಯಿಂದಾಗಿ ಮಕ್ಕಳು ಸ್ವಲೀನತೆಗೆ ಗುರಿಯಾಗುತ್ತಿದ್ದಾರೆ. ಮಹಿಳೆಯ ತನ್ನ ಹೆಣ್ತನವನ್ನು ಮರೆತರೆ ಅಥವಾ ಕಡೆಗಣಿಸಿದರೆ, ಪುರುಷ ಪುರುಷತ್ವವನ್ನು ಮರೆತರೆ ಅವರಿಗೆ ಹುಟ್ಟುವ ಹೆಣ್ಣು ಮಗು ಗಂಡಿನ ಗುಣಲಕ್ಷಣ ಹೊಂದಿರುತ್ತದೆ, ಇಲ್ಲದೆ ಹೋದರೆ ನಪುಂಸಕನಾಗುತ್ತದೆ ಎಂದು ತಿಳಿಸಿದ್ದಾರೆ. 
ರಜಿತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಶಿಕ್ಷಣ ಸಚಿವೆ ಕೆ.ಕೆ. ಶೈಲಜಾ ಅವರು, ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಕಾರ್ಯಕ್ರಮಕ್ಕೆ ರಜಿತ್ ಅವರನ್ನು ಆಹ್ವಾನಿಸಿದ್ದರೆ, ಅದನ್ನು ತಡೆಹಿಡಿಯಬೇಕು ಎಂದು ಸೂಚಿಸಿದ್ದಾರೆ. 
ರಜಿತ್ ಅವರು ಇದೇ ರೀತಿಯ ಹಲವು ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದು, ಈ ಕುರಿತ ಕೆಲ ವಿಡಿಯೋಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿವೆ. ರಜಿತ್ ಅವರು ಯೂಟ್ಯೂಬ್ ನಲ್ಲಿ 2,500 ಮಂದಿ ಹಿಂಬಾಲಕರನ್ನೂ ಹೊಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT