ಬದೌನ್(ಉತ್ತರಪ್ರದೇಶ): ಕೇಸರಿಮಯಗೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಇದೀಗ ನೀಲಿ ಬಣ್ಣ ಬಳಿಯಲಾಗಿದೆ.
ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಮುಖಂಡ ಹಿಮೇಂದರ್ ಗೌತಮ್ ಅವರು ತಾವೇ ಖುದ್ದಾಗಿ ನಿಂತು ಅಂಬೇಡ್ಕರ್ ಪ್ರತಿಮಿಗೆ ನೀಲಿ ಬಣ್ಣ ಹಚ್ಚಿಸಿದ್ದಾರೆ.
ಭಾನುವಾರ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಅವರ ಹೊಸ ಪ್ರತಿಮೆ ಅನಾವರಣಗೊಂಡಿತ್ತು. ಆದರೆ ಈ ಪ್ರತಿಮೆ ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ ಇದ್ದಿದ್ದನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದರು.