ಗುಲಾಂ ನಬಿ ಆಜಾದ್ 
ದೇಶ

ನನ್ನ ಮಾಜಿ ಚುನಾವಣಾ ಏಜೆಂಟ್ ನ್ನು ಬಿಜೆಪಿ ಕೋಮುವಾದಿಯನ್ನಾಗಿಸಿದೆ: ಗುಲಾಂ ನಬಿ ಆಜಾದ್

ಬಿಜೆಪಿ ನನ್ನ ಮಾಜಿ ಚುನಾವಣಾ ಏಜೆಂಟ್ ನ್ನು ಕೋಮುವಾದಿಯನ್ನಾಗಿಸಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.

ನವದೆಹಲಿ: ಕಥುವಾ ನಲ್ಲಿ ನಡೆದಿರುವ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಬಿಜೆಪಿ ತಮ್ಮ ಮಾಜಿ ಚುನಾವಣಾ ಏಜೆಂಟ್ ನ್ನು ಕೋಮುವಾದಿಯನ್ನಾಗಿಸಿದೆ ಎಂದು ಆರೋಪಿಸಿದ್ದಾರೆ.  
ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ಬಾರ್ ಕೌನ್ಸಿಲ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಾರ್ ಕೌನ್ಸಿಲ್ ಆರೋಪಿಯೋರ್ವನ ಪರವಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಎಫ್ಐ ಆರ್ ನ್ನು ವಿರೋಧಿಸಿರುವ ಆರೋಪ ಗುಲಾಂ ನಬಿ ಆಜಾದ್ ಅವರ ಮಾಜಿ ಚುನಾವಣಾ ಏಜೆಂಟ್ ಬಿಎಸ್ ಸ್ಲಾಥಿಯಾ ವಿರುದ್ಧವೂ ಕೇಳಿಬಂದಿದ್ದು, ಸ್ಲಾಥಿಯಾ ಅವರನ್ನು ಬಿಜೆಪಿ ಕೋಮುವಾದಿಯನ್ನಾಗಿಸಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ಕಥುವಾ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸ್ಲಾಥಿಯಾ ಆಗ್ರಹಿಸಿದ್ದಾರೆ. ಸ್ಲಾಥಿಯಾ ಅವರು ತಮಗೆ ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ವಾದ ಮಾಡಬಾರದೆಂದು ಬೆದರಿಕೆ ಹಾಕಿದ್ದರು ಎಂದು ಜಮ್ಮುವಿನ ವಕೀಲರಾದ ಡಿಎಸ್ ರಜ್ವತ್ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT