ಪಕ್ಷದ ಉಪವಾಸ ಸತ್ಯಾಗ್ರಹ ದಿನದಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ! 
ದೇಶ

ಪಕ್ಷದ ಉಪವಾಸ ಸತ್ಯಾಗ್ರಹ: ಗೋಡಂಬಿ ತಿಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ

ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು...

ನವದೆಹಲಿ: ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ  ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದರೂ, ಬಿಜೆಪಿ ನಾಯಕರೊಬ್ಬರು ಜ್ಯೂಸ್ ಹಾಗೂ ಒಣ ಹಣ್ಣುಗಳನ್ನು ತಿಂದಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಬಿಜೆಪಿ ನಾಯರ ಹರಕ್ ಸಿಂಗ್ ರಾವತ್ ಅವರು ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದು, ತಮ್ಮ ತಪ್ಪನ್ನು ರಾವತ್ ಅವರು ಒಪ್ಪಿಕೊಂಡಿದ್ದಾರೆ. 
ಮೋದಿಯವರು ನೀಡಿದ್ದ ಸೂಚನೆ ಬಗ್ಗೆ ಮಾಹಿತಿ ಅರಿಯದ ಹರಕ್ ಸಿಂಗ್ ರಾವತ್ ಅವರು, ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದಾರೆ. ಪಕ್ಷದ ಎಲ್ಲಾ ನಾಯಕರು ಉಪವಾಸ ಮಾಡಿದ್ದಾರೆ. ಆದರೆ, ತಿಳಿಯದೆಯೇ ನಾನು ಕಾರ್ಯಕ್ರಮದಲ್ಲಿ ಗೋಡಂಬಿಗಳನ್ನು ತಿಂದುಬಿಟ್ಟೆ ಎಂದು ಹೇಳಿದ್ದಾರೆ. 
ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೆಲ ದಿನಗಳ ಹಿಂದಷ್ಟೇ ರಾಜಧಾನಿ ದೆಹಲಿಯ ರಾಜ್'ಘಾಟ್ ನಲ್ಲಿ ಕಾಂಗ್ರೆಸ್ ನಾಯಕರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರೊಬ್ಬರು ರೆಸ್ಟೋರೆಂಟ್ ವೊಂದರಲ್ಲಿ ಪೂರಿ ಹಾಗೂ ಸಾಗು ತಿನ್ನುತ್ತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದಕ್ಕೆ ಬಿಜೆಪಿ ಕೂಡ ವ್ಯಂಗ್ಯವಾಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT