ಶಾಮ್ಲಿ(ಉತ್ತರಪ್ರದೇಶ): ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ದಲಿತನನ್ನು ಕೊನೆಗೂ ಘರ್ ವಾಪಸಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯಶಸ್ವಿಯಾಗಿದ್ದಾರೆ.
ಉತ್ತರಪ್ರದೇಶದ ಶಾಮ್ಲಿ ಎಂಬಲ್ಲಿ ದಲಿತ ವ್ಯಕ್ತಿಯೋರ್ವ ತನ್ನ ಗೆಳತಿ ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಚ್ಛಿಸಿದ್ದ ಇದಕ್ಕೆ ಮೌಲ್ವಿ ಸಹ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸೂಚಿಸಿದ್ದರು. ಅಂತೆ ಮುಜಾಫರ್ ನಗರದ ಕೋರ್ಟ್ ನಲ್ಲಿ ಮೌಲ್ವಿ ಆತನನ್ನು ಮುಸ್ಲಿಂ ಆಗಿ ನೊಂದಾಯಿಸಿದ್ದರು.
ಈ ವಿಷಯ ತಿಳಿದ ಕೂಡಲೇ ಭಜರಂಗ ದಳ ಸೇರಿದಂತೆ ಹಲವು ಹಿಂದೂ ಸಂಘಟನೆ ಮುಖಂಡರು ಆತನ ಮನೆಗೆ ತೆರಳಿ ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲಿಗೆ ದಲಿತ ಯುವಕ ಘರ್ ವಾಪಸಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆದರೆ ಬಳಿಕ ಆತ ಮನೆಯೊಳಗೆ ಹೋಗಿ ದಾಡಿಯನ್ನು ಬೋಳಿಸಿಕೊಂಡು ಅಣೆಗೆ ತಿಲಕವಿಟ್ಟುಕೊಂಡು ಹೊರಗೆ ಬಂದಿದ್ದು ಆತ ಮತ್ತೆ ಘರ್ ವಾಪಸಿ ಮಾಡಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos