ಎಂ ಕರುಣಾನಿಧಿ 
ದೇಶ

ಕರುಣಾನಿಧಿಯವರ ಸಹಿ ಹಿಂದಿನ ಆಸಕ್ತಿಕರ ವಿಷಯ

ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಎಲ್ಲರ ಗಮನ ಸೆಳೆಯುತ್ತಿತ್ತು...

ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಎಲ್ಲರ ಗಮನ ಸೆಳೆದಿತ್ತು, ಅದರ ಹಿಂದೆ ವಿಶೇಷವಿದೆ. ಅದರಲ್ಲಿ ವಿಶೇಷ ಸಂದೇಶವಿದೆ, ತಮ್ಮ ಗೋಪಾಲಪುರಂ ನಿವಾಸವನ್ನು ಅಣ್ಣೈ ಅಂಜುಗಂ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿದ್ದ ವೇಳೆ ಸಹಿ ಮಾಡುವಾಗ ಸಹಿಯ ಹಿಂದಿನ ವಿಶೇಷತೆಯನ್ನು ಬಹಿರಂಗಪಡಿಸಿದ್ದರು.

ಹಾಳೆಗಳಲ್ಲಿ ಅವರ ಸಹಿಯನ್ನು ಲಗತ್ತಿಸುವಂತೆ ಹೇಳುತ್ತಿದ್ದಾಗ ಅವರ ಹಿಂದಿನ ದಿನಗಳ ನೆನಪುಗಳು ಅವರ ಮುಂದೆ ಬರುತ್ತಿದ್ದವಂತೆ.ದ್ರಾವಿಡ ನಾಡು ನನ್ನ ಸಹಿಯಲ್ಲಿದೆ ಎಂದು ತನ್ನ ಆಪ್ತರಿಗೆ ಹೇಳುತ್ತಿದ್ದರಂತೆ. ಸಹಿಯಲ್ಲಿನ ವಿ ಆಕಾರದ ತಿರುವು ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ.

ಸಹಿಯ ಕೆಳಗಿನ ತಿರುವು ಶ್ರೀಲಂಕಾವನ್ನು ಪ್ರತಿನಿಧಿಸುತ್ತದೆ ಎಂದು ಕೂಡ ಅವರು ಹೇಳುತ್ತಿದ್ದರು. ಹಲವು ದಶಕಗಳ ಹಿಂದೆ ಅವರು ತಿರುಚಿ ಜೈಲಿನಲ್ಲಿದ್ದಾಗ ಈ ರೀತಿ ವಿಶೇಷ ಸಹಿ ಮಾಡಲು ಆರು ತಿಂಗಳು ಸತತ ಅಭ್ಯಾಸ ಮಾಡಿದ್ದರಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT