ಚೆನ್ನೈ : ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಸಂಸ್ಕಾರವಾಗಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೂಪರ್ ಸ್ಟಾರ್ ಕಮ್ ರಾಜಕಾರಣಿ ರಜನಿಕಾಂತ್ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಯಲಲಿತಾ ಹಾಗೂ ಕರುಣಾನಿಧಿ ತಮಿಳು ಜನರ ಧ್ವನಿಯಾಗಿದ್ದರು. ಆ ಧ್ವನಿಗೆ ಮರೀನಾ ಬೀಚ್ ನಲ್ಲಿ ಸ್ಥಳವಕಾಶ ಪಡೆಯುವ ಅರ್ಹತೆ ಹೊಂದಿದೆ. ತಮಿಳುನಾಡಿನ ಈಗಿನ ನಾಯಕರು ದುಃಖದ ಈ ಸಮಯದಲ್ಲಿ ಘನತೆ ತೋರುತ್ತಾರೆ ಎಂದು ಭಾವಿಸಿರುವುದಾಗಿ ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಹೇಳಿದ್ದಾರೆ.
ಅಣ್ಣಾ ದೂರೈ ಬಳಿಯೇ ಕರುಣಾನಿಧಿ ಅವರನ್ನು ಅಂತ್ಯಸಂಸ್ಕಾರ ಮಾಡಲು ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದು ನನ್ನ ದಯನೀಯ ಕೋರಿಕೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.