ಸಂಗ್ರಹ ಚಿತ್ರ 
ದೇಶ

ಡೊಕ್ಲಾಂ ವಿವಾದ ಈಗ ಮುಗಿದ ಅಧ್ಯಾಯ: ಚೀನಾ

ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಗಡಿ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಉಭಯ ದೇಶಗಳು ವಿವಾದದ ಹೊರತಾಗಿ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವತ್ತ ಮುನ್ನಡೆದಿವೆ ಎಂದು ಚೀನಾ ಹೇಳಿದೆ.

ನವದೆಹಲಿ: ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಗಡಿ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಉಭಯ ದೇಶಗಳು ವಿವಾದದ ಹೊರತಾಗಿ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವತ್ತ ಮುನ್ನಡೆದಿವೆ ಎಂದು ಚೀನಾ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಚೀನಾ ರಾಯಭಾರಿ ಲುವೊ ಝಾಹೋಯಿಯಿ ಅವರು, ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧದ ಪುಸ್ತಕದಲ್ಲಿ ಡೊಕ್ಲಾಂ ಎಂಬ ಪುಟವನ್ನು ನಾವು ತಿರುವಿ ಹಾಕಿ ಮುಂದಿನ ಪುಟಕ್ಕೆ ಸಾಗಿದ್ದೇವೆ. ಅದು ಈಗ ಮುಗಿದ ಅಧ್ಯಾಯ. ಡೊಕ್ಲಾಂ ಹೊರತಾಗಿಯೂ ಭಾರತ ಮತ್ತು ಚೀನಾ ಸಾಕಷ್ಟು ವಿಚಾರಗಳಲ್ಲಿ ಸೌಹಾರ್ಧ ಸಂಬಂಧ ಹೊಂದಿವೆ. ಕೇವಲು ಒಂದೇ ಒಂದು ವಿಚಾರದಿಂದ ಈ ಸಂಬಂಧ ಹಳಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಡೊಕ್ಲಾಂ ವಿಚಾರದ ಬಳಿಕವೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಒಂದೇ ವರ್ಷದಲ್ಲಿ ಸಾಕಷ್ಟು ಭಾರಿ ಭೇಟಿಯಾಗಿದ್ದಾರೆ. ಇದು ಉಭಯ ದೇಶಗಳ ನಾಯಕರಿಗೆ ಪರಸ್ಪರ ಇರುವ ಗೌರವ ಮತ್ತು ನಂಬಿಕೆಗೆ ಸಾಕ್ಷಿ ಎಂದು ಹೇಳಿದ್ದಾರೆ.
ಅಂತೆಯೇ ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ಗಣನೀಯವಾಗಿ ಉತ್ತಮಗೊಳ್ಳುತ್ತಿದೆ. ಇದು ನಿಜಕ್ಕೂ ಸಂತಸದ ವಿಚಾರ. ನಮ್ಮ ಮುಂದೆ ಇನ್ನೂ ಸಾಕಷ್ಟು ಗಂಭೀರ ಸಮಸ್ಯೆಗಳಿದ್ದು ಈ ಸಮಸ್ಯೆಗಳ ವಿರುದ್ಧ ಭಾರತ ಮತ್ತು ಚೀನಾ ಹೋರಾಡಬೇಕಿದೆ ಎಂದು ಲುವೊ ಝಾಹೋಯಿಯಿ ಅವರು ಹೇಳಿದ್ದಾರೆ.
ಏತನ್ಮಧ್ಯೆ 73 ದಿನಗಳ ಕಾಲ ಭಾರತ ಮತ್ತು ಚೀನಾ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿಭಾಗದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿಗೆ ಸ್ಪಷ್ಟನೆ ನೀಡಿರುವ ಚೀನಾ ಸೇನೆ ತಮ್ಮ ಗಡಿ ಭಾಗದಲ್ಲಿ ಮಾತ್ರ ತಾವು ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದೇವೆ ಎಂದು ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರದ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ, 24 ಗಂಟೆಯೊಳಗೆ ಗಡಿಪಾರು!

"ಕೆಲಸದ ಹೊರೆ ನಿರ್ವಹಣೆ ಅಗತ್ಯವಿದ್ದರೆ, IPL ಬಿಡಿ": ಶುಭ್‌ಮನ್ ಗಿಲ್‌ಗೆ ಖಡಕ್ ಸಂದೇಶ!

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

SCROLL FOR NEXT