ದೇಶ

ಭಾರತ, ಅಮೆರಿಕಾ ಜಂಟಿಯಾಗಿ ಭಯೋತ್ಪಾದನೆ ಎದುರಿಸಲು ಬದ್ಧ- ಕಿರಣ್ ರಿಜಿಜು

Nagaraja AB

ನವದೆಹಲಿ:ಅಮೆರಿಕಾದ ಭಾರತೀಯ ರಾಯಭಾರಿ ಕೆನ್ನಿತ್ ಐ. ಜಸ್ಟರ್ ಹಾಗೂ ಇತರ ಅಧಿಕಾರಿಗಳೊಂದಿಗೆ ಇಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಮಾತುಕತೆ ನಡೆಸಿದರು.

ಭಯೋತ್ಪಾದನೆ ನಿಗ್ರಹ ಹಾಗೂ ವಿಶ್ವಶಾಂತಿಗಾಗಿ ಉಭಯ ದೇಶಗಳು ಬದ್ಧವಾಗಿರುವುದಾಗಿ  ಎರಡು ದೇಶಗಳ ನಾಯಕರು ಪುನರ್ ಉಚ್ಚರಿಸಿದರು.

ಈ ನಿಟ್ಟಿನಲ್ಲಿ, ಭಾರತ ಮತ್ತು ಅಮೆರಿಕ ನಡುವೆ  ನಡೆಯುತ್ತಿರುವ ಸ್ವದೇಶಗಳ ಭದ್ರತಾ ಮಾತುಕತೆ  ಮುಂದುವರಿಸಲು ಜಸ್ಟ್ ತಮ್ಮ ದೇಶದ ಉತ್ಸಾಹವನ್ನು ವ್ಯಕ್ತಪಡಿಸಿದರು. ಮಾತುಕತೆ ಸಂದರ್ಭದಲ್ಲಿ ಭಾರತ- ಅಮೆರಿಕಾ ನಡುವಿನ ಒಪ್ಪಂದವನ್ನು ಮತ್ತಷ್ಟು ಬಲಗೊಳಿಸುವ ಕ್ರಮಗಳ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಿದರು.

ಕಿರಣ್ ರಿಜಿಜು ಅವರೊಂದಿಗೆ ಮಾತುಕತೆ ಫಲಪ್ರಧವಾಗಿತ್ತು ಎಂದು ಜಸ್ಟರ್ ಟ್ವಿಟರ್ ನಲ್ಲಿ  ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಿರಣ್ ರಿಜಿಜು ಕೂಡಾ  ಟ್ವಿಟರ್ ನಲ್ಲಿ ಪೋಟೋ ಹಾಕಿಕೊಂಡಿದ್ದು,  ಭದ್ರತೆ ಕುರಿತು ವ್ಯಾಪಕ ರೀತಿಯಲ್ಲಿ ಮಾತುಕತೆ ನಡೆದಿದ್ದು, ಈ ಸಭೆ ತಮ್ಮಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.


SCROLL FOR NEXT