ಐಎಎಸ್ ಅಧಿಕಾರಿಗಳ ಚಿತ್ರ 
ದೇಶ

ಕೇರಳ: ನಿರಾಶ್ರಿತರ ಕ್ಯಾಂಪ್‌ನಲ್ಲಿ ಸಾಮಗ್ರಿಗಳನ್ನು ಅನ್‌ಲೋಡ್‌ ಮಾಡಿದ ಐಎಎಸ್ ಅಧಿಕಾರಿಗಳು, ಫೋಟೋ ವೈರಲ್

ಮಹಾಮಳೆ, ಭೂಕುಸಿತ ಪ್ರವಾಹದಿಂದಾಗಿ ಕೇರಳ ಅಕ್ಷರಶಃ ತತ್ತರಿಸಿದ್ದು ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ...

ಕೊಚ್ಚಿ: ಮಹಾಮಳೆ, ಭೂಕುಸಿತ ಪ್ರವಾಹದಿಂದಾಗಿ ಕೇರಳ ಅಕ್ಷರಶಃ ತತ್ತರಿಸಿದ್ದು ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 
ಕೇರಳದ ಇತಿಹಾಸದಲ್ಲೇ ಈ ಮಟ್ಟಿನ ಮಳೆ ಹಿಂದೆಂದೂ ಆಗಿರಲಿಲ್ಲ. ಇನ್ನು ಪ್ರವಾಹ, ಭೂಕುಸಿತದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಸಾವಿರಾರೂ ಮಂದಿ ನಿರಾಶ್ರಿತರ ಕ್ಯಾಂಪ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. 
ನಿರಾಶ್ರಿತರಿಗಾಗಿ ಕ್ಯಾಂಪ್ ಗಳನ್ನು ತೆರೆಯಲಾಗಿದ್ದು ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆ ಭಾರತೀಯ ಸೇನೆ ಹಾಗೂ ತುರ್ತು ನಿರ್ವಹಣ ಸಿಬ್ಬಂದಿಗಳು ಸಕ್ರಿಯರಾಗಿದ್ದಾರೆ. ಇನ್ನು ನಿರಾಶ್ರಿತರ ಕ್ಯಾಂಪ್ ಗೆ ನೆರೆ ರಾಜ್ಯಗಳಿಂದ ಆಹಾರ, ಸರಂಜಾಮುಗಳು ಬರುತ್ತಿದೆ. ಇನ್ನು ಇಬ್ಬರು ಐಎಎಸ್ ಅಧಿಕಾರಿಗಳು ತಮ್ಮ ಹೆಗಲ ಮೇಲೆ ಸಾಮಗ್ರಿಗಳನ್ನು ಹೊತ್ತು ನಿರಾಶ್ರಿತ ಕ್ಯಾಂಪ್ ನಲ್ಲಿ ಶೇಖರಿಸುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ. 
ಕೇರಳ ಆಹಾರ ಭದ್ರತೆ ಆಯುಕ್ತ ಎಂಜಿ ರಾಜಮಾಣಿಕ್ಯಂ ಮತ್ತು ವೈನಾಡ್ ಸಬ್ ಕಲೆಕ್ಟರ್ ಎನ್ಎಸ್ಕೆ ಉಮೇಶ್ ಎಂಬುವರು ವಾಹನದಿಂದ ಸಾಮಗ್ರಿಗಳನ್ನು ಅನ್ ಲೋಡ್ ಮಾಡುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದ್ದು ಐಎಎಸ್ ಅಧಿಕಾರಿಗಳ ಈ ಕಾರ್ಯವನ್ನು ನೆಟಿಗರು ಪ್ರಶಂಸಿಸುತ್ತಿದ್ದಾರೆ. 
ಕೇರಳದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಇಲ್ಲಿಯವರೆಗೂ 100ಕ್ಕೂ ಮಂದಿ ಮೃತಪಟ್ಟಿದ್ದು 50 ಸಾವಿರಕ್ಕೂ ಹೆಚ್ಚು ನಿರಾಶ್ರಿತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ!

ಗಂಡನಿಲ್ಲದಾಗ ಪ್ರೇಮಿಯನ್ನು ಕರೆಸಿಕೊಂಡ ವಿವಾಹಿತೆ ಮಾಡಿದ್ದು ಘೋರ ಕೃತ್ಯ: ಮರ್ಮಾಂಗ ಕಳೆದುಕೊಂಡು ವ್ಯಕ್ತಿ ನರಳಾಟ!

'ನೆರೆಹೊರೆಯವರು ಕೆಟ್ಟವ್ರು, ನಾವೇನ್ ಮಾಡ್ಬೇಕು ಅನ್ನೋದನ್ನ ಬೇರೆಯವ್ರು ಹೇಳೋದ್ ಬೇಡ: ಜೈಶಂಕರ್‌ ಖಡಕ್ ವಾರ್ನಿಂಗ್

ಬಳ್ಳಾರಿ: ವಾಲ್ಮೀಕಿ ಪುತ್ಥಳಿ ಅನಾವರಣ, ತಾತ್ಕಾಲಿಕ ಮುಂದೂಡಿಕೆ- ನಾಗೇಂದ್ರ

SCROLL FOR NEXT