ಅಮರನಾಥ 
ದೇಶ

ಯಾತ್ರಾರ್ಥಿಗಳಿಲ್ಲದೆ ಅಮರನಾಥ ಯಾತ್ರೆ ಸ್ಥಗಿತ!

ಸಾಕಷ್ಟು ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲದೆ ಇರುವ ಕಾರಣ ಇಂದು ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದುಗೊಳಿಸಲಾಗಿದೆ!

ಜಮ್ಮು: ಸಾಕಷ್ಟು ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲದೆ ಇರುವ ಕಾರಣ ಇಂದು ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದುಗೊಳಿಸಲಾಗಿದೆ! . ಬೇಸ್ ಕ್ಯಾಂಪ್ ನಲ್ಲಿ ಯಾತ್ರಿಕರ ಆಗಮನದ ಆಧಾರದ ಮೇಲೆ ಯಾತ್ರೆ ಪುನಾರಂಬ ಆಗಲಿದೆ ಎಂದು  ಮೂಲಗಳು ತಿಳಿಸಿವೆ.
ಇದೇ ವೇಳೆ ಪೂಂಚ್ ಜಿಲ್ಲೆಯ ಭಗವತಿ ನಗರ ಬೇಸ್ ಕ್ಯಾಂಪ್ ನಿಂದ 449  ಯಾತ್ರಾರ್ಥಿಗಳ ತಂಡ ಅಮರನಾಥ ದರ್ಶನಕ್ಕೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಿನ್ನೆ, 43 ಯಾತ್ರಿಕರ ಚಿಕ್ಕ ತಂಡವು ದಕ್ಷಿಣ ಕಾಶ್ಮೀರ ಹಿಮಾಲಯದ 3,880 ಮೀಟರ್ ಎತ್ತರದ ಪವಿತ್ರ ಗುಹಾ ದೇವಾಲಯ ದರ್ಶನಕ್ಕಾಗಿ ತೆರಳಿದ್ದಿತು."ಯಾತ್ರಾರ್ಥಿಗಳಾರೂ ಆಗಮಿಒಸದೆ ಇದ್ದ ಕಾರಣ ಈ ಸಮಯ ಯಾತ್ರೆಯನ್ನು ನಿಲ್ಲಿಸಲಾಗಿದೆ.ಎಂದು ಅಧಿಕಾರಿಗಳು ಹೇಳಿದರು. ಭಕ್ತರು ಮತ್ತೆ ಯಾತ್ರೆಗಾಗಿ ಬೇಸ್ ಕ್ಯಾಂಪ್ ಗೆ ಆಗಮಿಸಿದ್ದಾದರೆ ಪುನಃ ಯಾತ್ರೆ ಆರಂಭವಾಗಲಿದೆ.ಆಗಸ್ಟ್ 26 ರಂದು ತೀರ್ಥಯಾತ್ರೆ ಮುಕ್ತಾಯಗೊಳ್ಳುವ ಮೊದಲು ಬಂದವರಿಗೆ ದೇವಾಕ್ಲಯದಲ್ಲಿ ಪೂಜೆಗೆ ಅವಕಾಶ ಒದಗಿಸಲಾಉತ್ತದೆ. ಎಂದು ಅವರು ಹೇಳಿದ್ದಾರೆ.
ಬಾಲ್ತಾಲ್ ಮತ್ತು ಪಹಲ್ಗಾಂಮ್ ಅವಳಿ ಮಾರ್ಗಗಳಿಂದ 60 ದಿನ ಯಾತ್ರೆ ಜೂನ್ 28 ರಂದು ಪ್ರಾರಂಭವಾಗಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.ನಿನ್ನೆ (ಸೋಮವಾರ) ಸಂಜೆವರೆಗೆ 2,83,140 ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT