ದೇಶ

ಶಬರಿಮಲೆ ದರ್ಶನಕ್ಕೆ ಆಗಮಿಸದಂತೆ ಅಯ್ಯಪ್ಪ ಭಕ್ತರಿಗೆ ಮನವಿ

Lingaraj Badiger
ಶಬರಿಮಲೆ: ಪ್ರವಾಹದಿಂದಾಗಿ ಪಂಪಾ ನದಿ ತುಂಬಿ ಹರಿಯುತ್ತಿದ್ದು, ಓಣಂಗೆ ಶಬರಿಮಲೆ ದೇವಸ್ಥಾನಕ್ಕೆ ಆಗಮಿಸದಂತೆ ತಿರುವಂಕೂರು ದೇವಸ್ವಂ ಮಂಡಳಿ ಮಂಗಳವಾರ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮನವಿ ಮಾಡಿದೆ.
ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹಾಳಾಗಿದ್ದು, ಭಾರೀ ಮಳೆಯಿಂದಾಗಿ ಹಲವಾರು ಮರಗಳು ರಸ್ತೆಯಲ್ಲಿ ಬಿದ್ದಿವೆ ಎಂದು ದೇವಸ್ವಂ ಮಂಡಳಿ ಎಚ್ಚರಿಸಿದೆ.
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 23ರಿಂದ ಓಣಂ ಪೂಜೆ ಆರಂಭವಾಗಲಿದ್ದು, ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ.
SCROLL FOR NEXT