ಪ್ರವಾಹ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿರುವುದು 
ದೇಶ

ಕೇರಳಕ್ಕೆ ನೀಡುವ ವಿದೇಶಿ ನೆರವನ್ನು ಭಾರತ ಒಪ್ಪಿಕೊಳ್ಳುತ್ತಿಲ್ಲ: ಥಾಯ್‏ಲ್ಯಾಂಡ್

ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ...

ನವದೆಹಲಿ: ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ ಥಾಯ್‏ಲ್ಯಾಂಡ್ ರಾಯಭಾರಿ ಚುಟಿನ್‏ಟಾರ್ನ್ ಸ್ಯಾಮ್ ಗೊನ್ಸಕ್ಡಿ ಅವರು ಹೇಳಿದ್ದಾರೆ.
ಕೇರಳ ಪ್ರವಾಹ ಪರಿಹಾರಕ್ಕಾಗಿ ಭಾರತ ಸರ್ಕಾರ ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸದಿರುವುದಕ್ಕೆ ಅನೌಪಚಾರಿಕವಾಗಿ ವಿಷಾದಿಸುತ್ತೇನೆ ಮತ್ತು ನಮ್ಮ ಹೃದಯ ಭಾರತೀಯರೊಂದಿಗೆ ಇವೆ ಎಂದು ಚುಟಿನ್‏ಟಾರ್ನ್ ಅವರು ಟ್ವೀಟ್ ಮಾಡಿದ್ದಾರೆ.
ಕೇರಳ ಪ್ರವಾಹ ಪೀಡಿತರಿಗೆ ದೇಶ-ವಿದೇಶಗಳಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಆದ್ರೆ ವಿದೇಶಿ ನೆರವನ್ನು ಭಾರತ ನಿರಾಕರಿಸುವ ಸಾಧ್ಯತೆ ಇದೆ. ಕೇರಳ ಪ್ರವಾಹದ ನಂತರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಯುಎಇ, ಥಾಯ್‏ಲ್ಯಾಂಡ್, ಕತಾರ್ ಹಾಗೂ ಮಾಲ್ಡೀವ್ಸ್ ರಾಜ್ಯಗಳು ಸಹಾಯ ಮಾಡಲು ಮುಂದೆ ಬಂದಿವೆ.
ಉನ್ನತ ಮೂಲಗಳ ಪ್ರಕಾರ, ಭಾರತ ವಿದೇಶದ ಸಹಾಯ ನಿರಾಕರಿಸಲಿದೆಯಂತೆ. ನೆರವಿಗೆ ಮುಂದೆ ಬಂದ ದೇಶಗಳಿಗೆ ಕೃತಜ್ಞತೆ ಸಲ್ಲಿಸಿರುವ ಭಾರತ ತನ್ನ ಸಂಪನ್ಮೂಲ ಬಳಸಿಕೊಂಡು ಕೇರಳ ಪುನರ್ ನಿರ್ಮಾಣ ಕಾರ್ಯ ಮಾಡಲಿದೆಯಂತೆ. ಭಾರತದಲ್ಲಿರುವ ಸಂಪನ್ಮೂಲ ಕೇರಳ ಪುನರ್ ನಿರ್ಮಾಣಕ್ಕೆ ಸಾಕು ಎಂಬುದು ಭಾರತದ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT