ದೇಶ

ಎಮ್ಮೆ ಕಳ್ಳತನದ ಶಂಕೆ: 20 ವರ್ಷದ ಯುವಕನ ಮೇಲೆ ಸಾಮೂಹಿಕ ಹಲ್ಲೆ; ಹತ್ಯೆ

Srinivas Rao BV
ಬರೇಲಿ: ದುಬೈ ನಿಂದ ಮನೆಗೆ ಬಂದಿದ್ದ 20 ವರ್ಷದ ಯುವಕನನ್ನು ಗ್ರಾಮಸ್ಥರು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಶಾರೂಖ್, 20 ಹಲ್ಲೆಗೊಳಗಿ ಮೃತಪಟ್ಟ ವ್ಯಕ್ತಿಯಾಗಿದ್ದು, ಪ್ರಕರಣದ ಸಂಬಂಧ ನಾಲ್ವರನ್ನು ಕಂಟೋನ್ಮೆಂಟ್ ಪೊಲೀಸರು ಬಂಧಿಸಿದ್ದಾರೆ. ಶಾರೂಖ್ ಜೊತೆಗೆ 3 ಯುವಕರು ಆ.29 ರಂದು ರಾತ್ರಿ ಅಡ್ಡಾಡಲು ಹೋಗಿದ್ದರು. ಇವರು ಎಮ್ಮೆ ಕದ್ದಿದ್ದಾರೆ ಎಂದು ಭಾವಿಸಿದ ಗ್ರಾಮಸ್ಥರು ಶಾರೂಖ್ ನನ್ನು ಹಿಡಿದು ಥಳಿಸಿದ್ದಾರೆ.  ಆದರೆ ಆತನ ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ, ದುಬೈ ನಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾರೂಖ್ ಇತ್ತೀಚೆಗಷ್ಟೇ ಮನೆಗೆ ವಾಪಸ್ಸಾಗಿದ್ದ. 
SCROLL FOR NEXT