ಸಂಗ್ರಹ ಚಿತ್ರ 
ದೇಶ

ನೌಕಾಪಡೆಯ ಬತ್ತಳಿಕೆ ಸೇರಲಿವೆ 56 ಸಮರನೌಕೆಗಳು, ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನ ವಾಹಕ

ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಲಿದ್ದು, ಬರೊಬ್ಬರಿ 56 ಅತ್ಯಾಧುನಿಕ ಸಮರನೌಕೆಗಳು ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನ ವಾಹಕವು ನೌಕಾಪಡೆಯ ಬತ್ತಳಿಕೆ ಸೇರಲಿವೆ ಎಂದು ತಿಳಿದುಬಂದಿದೆ.

ನವದೆಹಲಿ: ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಲಿದ್ದು, ಬರೊಬ್ಬರಿ 56 ಅತ್ಯಾಧುನಿಕ ಸಮರನೌಕೆಗಳು ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನ ವಾಹಕವು ನೌಕಾಪಡೆಯ ಬತ್ತಳಿಕೆ ಸೇರಲಿವೆ ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದ್ದು, ಈಗಾಗಲೇ ಮೂರನೇ ಯುದ್ಧ ವಿಮಾನ ವಾಹಕ ನೌಕೆಯನ್ನು ಸೇವೆಗೆ ತರಲು ಸಜ್ಜುಗೊಳಿಸುವ ವೇಳೆಯಲ್ಲೇ, 56 ಸಮರ ನೌಕೆಗಳು ಹಾಗು ಜಲಾಂತರ್ಗಾಮಿಗಳನ್ನು ಸೇವೆಗೆ ತರಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಂಬಾ ತಿಳಿಸಿದ್ದಾರೆ.
ಮಂಗಳವಾರ ನೌಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಭಾರತೀಯ ನೌಕಾಪಡೆ ದೇಶದ ನೌಕಾ ಪ್ರದೇಶವನ್ನು ನೌಕಾಪಡೆ ಸದಾ ಕಣ್ಣಲ್ಲಿ ಕಣ್ಣಿಟ್ಟು ಪಹರೆ ಕಾಯುತ್ತಿದೆ. ಅಂತೆಯೇ ಕರಾವಳಿ ರಕ್ಷಣೆಯನ್ನು ಮತ್ತಷ್ಟು ಬಿಗಿ ಮಾಡುವ  ಉದ್ದೇಶದಿಂದ ಸುಮಾರು 2.5 ಲಕ್ಷ ಮೀನುಗಾರರ ದೋಣಿಗಳಿಗೆ ಟ್ರಾನ್ಸ್ ಪಾಂಡರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ತುರಂತವಾಗಿ ಸಾಗುತ್ತಿದೆ ಎಂದರು.
ಅಂತೆಯೇ ಮೂರನೇ ಯುದ್ಧ ವಿಮಾನ ವಾಹಕ ಸಮರ ನೌಕೆಯನ್ನು ಸೇವೆಗೆ ತರಲು ಕೆಲಗಳು ಶೀಘ್ರಗತಿಯಲ್ಲಿ ಸಾಗುತ್ತಿವೆ. ಇದರ ನಡುವೆಯೇ 56 ಹೊಸ ಸಮರ ನೌಕೆಗಳು ಹಾಗು ಜಲಾಂತರ್ಗಾಮಿಗಳಲ್ಲದೇ 32 ಹೊಸ ಸಮರನೌಕೆಗಳು ನಿರ್ಮಾಣದ ಹಂತದಲ್ಲಿವೆ.  ಸೀಶೆಲ್ಸ್ ನ ಅಸಂಪ್ಷನ್‌ ದ್ವೀಪದಲ್ಲಿ ನೌಕಾ ನೆಲೆ ಸ್ಥಾಪನೆ ಸಂಬಂಧ ಸರ್ಕಾರಗಳ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ಲಂಬಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT