ದೇಶ

ಪಶ್ಚಿಮ ಬಂಗಾಳ: 36 ಗಂಟೆಗಳಲ್ಲಿ ನಾಲ್ಕು ಟಿಎಂಸಿ ಕಾರ್ಯಕರ್ತರ ಹತ್ಯೆ

Shilpa D
ಕೊಲ್ಕೋತಾ: ಕಳೆದ 36 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಎರಡು ಪ್ರತ್ಯೇಕ ಶೂಟ್ ಔಟ್ ಗಳಲ್ಲಿ 4 ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.
15 ಗನ್ ಮ್ಯಾನ್ ಸುತ್ತುವರಿದಿದ್ದ ಕಡೆ ನಡೆದ ಶೂಟೌಟ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ಸ್ಥಳೀಯ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ.
ಜೈ ಹಿಂದ್ ವಾಹಿನಿ ಅಧ್ಯಕ್ಷ ಸೈಫುದ್ದೀನ್ ಖಾನ್, ಅಮಿನ್ ಅಲಿ ಸರ್ದಾರ್ ಮತ್ತು ಸಲೀಂ ಖಾನ್, ಮೃತ ದುರ್ದೈವಿಗಳು. ರಾಜಕೀಯ ವೈಷಮ್ಯದಿಂದಾಗಿ ಈ ಕೊಲೆ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
SCROLL FOR NEXT