ಸಂಗ್ರಹ ಚಿತ್ರ 
ದೇಶ

ಮದುವೆ ಮನೆಯಲ್ಲಿ ಪುರುಷ-ಮಹಿಳೆಯರು ಒಟ್ಟಾಗಿ ಊಟ ಮಾಡುವುದು ಇಸ್ಲಾಂ ವಿರುದ್ಧ! ಉ.ಪ್ರ. ಧರ್ಮಗುರು ಫತ್ವಾ

ಉತ್ತರ ಪ್ರದೇಶದ ಪ್ರಸಿದ್ದ ದೇವಬಂದ್‌ ಮೂಲದ ದರೂಲ್‌ ಉಲೂಮ ತನ್ನ ವಿವಾದಾತ್ಮಕ ಫತ್ವಾಗಳಿಂದಲೇ ಆಗಾಗ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಹ ಇನ್ನೊಂದು ಫತ್ವಾ ಜಾರಿ ಮಾಡಿದ್ದು....

ಮುಜಾಫರ್‌ನಗರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಸಿದ್ದ ದೇವಬಂದ್‌ ಮೂಲದ ದರೂಲ್‌ ಉಲೂಮ ತನ್ನ ವಿವಾದಾತ್ಮಕ ಫತ್ವಾಗಳಿಂದಲೇ ಆಗಾಗ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಹ ಇನ್ನೊಂದು ಫತ್ವಾ ಜಾರಿ ಮಾಡಿದ್ದು ಅದರ ಅನುಸಾರ ಮದುವೆ ಅಥವಾ ಇನ್ನಾವುದೇ ಶುಭ ಸಮಾರಂಭಗಳಲ್ಲಿ ಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಇಸ್ಲಾಂ ಗೆ ವಿರುದ್ಧ  ಎಂದಿದೆ. ಇದೇ ವೇಳೆ ನಿಂತು ಊಟ ಮಾಡುವುದು ಸಹ ಧರ್ಮ ವಿರುದ್ಧ ಆವ್ಗಿದೆ ಎಂದೂ ಆದೇಶಿಸಿದೆ.
ದೇವಬಂದ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಫತ್ವಾ ಜಾರಿಗೆ ಬಂದಿದೆ.
ಇಸ್ಲಾಮಿನ ಷರಿಯತ್‌ ಕಾನೂನಿನಂತೆ ವಿವಾಹ ಮತ್ತಿತರೆ ಸಮಾರಂಭಗಳಲ್ಲಿ ಮಹಿಳೆ ಹಾಗೂ ಪುರುಷರು ಒಟ್ಟಾಗಿ ಕುಳಿತು ಊಟ ಮಾಡುವುದು ನಿಷೇಧ. ಅಲ್ಲದೆ ನಿಂತು ಆಹಾರ ಸೇವನೆ ಮಾಡುವುದು ಸಹ ಷರಿಯತ್‌ ಕಾನೂನಿನಂತೆ ಒಪ್ಪಿತ ಕ್ರಮವಲ್ಲ ಎಂದು ಫತ್ವಾದಲ್ಲಿ ವಿವರಿಸಲಾಗಿದೆ.
ಶುಭ ಸಮಾರಂಭಗಳಲ್ಲಿ ಅಪರಿಚಿತ ಪುರುಷರಿರುವ ಕಡೆ ಮಹಿಳೆಯರು ಆಹಾರ ಸೇವನೆ ಮಾಡುವುದು ಅಥವಾ ಅಂತಹಾ ಕಾರ್ಯಕ್ರಮದಲ್ಲಿ ಭಾಗವಹಿಸ್ವುದು ಕ್ಷಮಾರ್ಹವಲ್ಲದ ಅಪರಾಧ. ಎಲ್ಲಾ ಮುಸ್ಲೀಮರೂ ಷರಿಯತ್‌ ನಿಯಮ ಪಾಲನೆ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ಮುಸ್ಲೀಮರೂ ಈ ಫತ್ವಾ ಅನುಸರಿಸಬೇಕು ಎಂದು ದರೂಲ್‌ ಉಲೂಮ ಧರ್ಮಗುರುಗಳು ಮನವಿ ಮಾಡಿದ್ದಾರೆ.
ಕಳೆದ್ ದಿನಗಳಲ್ಲಿ ಸಹ ಇದೇ ದರೂಲ್‌ ಉಲೂಮ ಮಹಿಳೆಯರು ವ್ಯಾಕ್ಸಿಂಗ್ ಅಥವಾ ಶೇವಿಂಗ್ ಮಾಡುವುದರ ವಿರುದ್ಧ ಫತ್ವಾ ಜಾರಿ ಮಾಡಿತ್ತು.ಷರಿಯಾ ಕಾನೂನಿನಡಿಯಲ್ಲಿ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಅನ್ನು ಉತ್ತಮ ಎಂದು ಪರಿಗಣಿಸಲಾಗುವುದಿಲ್ಲದೇಹದ ಭಾಗಗಳಿಂದ  ವ್ಯಾಕ್ಸ್ ಮಾಡುವುದು ಅಥವಾ ಕ್ಷೌರದ ಮೂಲಕ ಕೂದಲು ತೆಗೆದುಹಾಕುವುದು ಖಿಲಾಫ್-ಎ-ಅದಾಬ್ (ಸಂಸ್ಕೃತಿಯ ವಿರುದ್ಧ), ಎಂದು ಅದು ಭಾವಿಸಿತ್ತು. ಅಲ್ಲದೆ ಮುಸ್ಲಿಂ ಮಹಿಳೆಯರು ಪುರುಷರು ಇರುವ ಬಳೆ ಅಂಗಡಿಗಳಲ್ಲಿ ಬಳೆ ಖರೀದಿಸುವಂತಿಲ್ಲ, ಒಂದು ವೇಳೆ ಖರೀದಿಸಿದರೂ ಅವರಿಂದ ಬಳೆ ಹಾಕಿಸಿಕೊಳ್ಳುವಂತಿಲ್ಲ ಎಂದೂ ಫತ್ವಾ ಹೊರಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT