ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳಬೇಡಿ: ಯುವಕರಿಗೆ ಹಮೀದ್ ಅನ್ಸಾರಿ 
ದೇಶ

ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳದಿರಿ: ಯುವಕರಿಗೆ ಹಮೀದ್ ಅನ್ಸಾರಿ

ಫೇಸ್'ಬುಕ್ ಮೂಲಕ ಪ್ರೀತಿ-ಪ್ರೇಮಕ್ಕೆ ಬಲಿಯಾಗದಿರಿ ಎಂದು ಪಾಕಿಸ್ತಾನದ ಹುಡುಗಿಯನ್ನು ಫೇಸ್ ಬುಕ್ ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂಬ ಶಂಕೆಯಲ್ಲಿ ಜೈಲು ಪಾಲಾಗಿ 6 ವರ್ಷಗಳ ಸೆರೆವಾಸ ಅನುಭವಿಸಿ...

ನವದೆಹಲಿ: ಫೇಸ್'ಬುಕ್ ಮೂಲಕ ಪ್ರೀತಿ-ಪ್ರೇಮಕ್ಕೆ ಬಲಿಯಾಗದಿರಿ ಎಂದು ಪಾಕಿಸ್ತಾನದ ಹುಡುಗಿಯನ್ನು ಫೇಸ್ ಬುಕ್ ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂಬ ಶಂಕೆಯಲ್ಲಿ ಜೈಲು ಪಾಲಾಗಿ 6 ವರ್ಷಗಳ ಸೆರೆವಾಸ ಅನುಭವಿಸಿ ಇದೀಗ ಭಾರತಕ್ಕೆ ಮರಳಿರುವ ಸಾಫ್ಟ್ ವೇರ್ ಇಂಜಿನಿಯರ್ ಹಮೀದ್ ಅನ್ಸಾರಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ. 
ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಗೆ ಬಿದ್ದು, ಅದರಿಂದ ನರಕ ದರ್ಶನ ಮಾಡಿ ಬಂದಿರುವ ಹಮೀದ್ ಅನ್ಸಾರಿಯವರ ಕಥೆ ಇಂದಿನ ಯುವಕರಿದ ಒಂದು ಪಾಠವಾಗಿದೆ ಎಂದೇ ಹೇಳಬಹುದು. 
2 ದಿನಗಳ ಹಿಂದ ಪಾಕಿಸ್ತಾನ ಸರ್ಕಾರದಿಂದ ಬಿಡುಗಡೆಗೊಂಡು ಅಟ್ಟಾರಿ ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿರುವ ಅನ್ಸಾರಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. 
ಈ ವೇಳೆ ಯುವಕರಿಗೆ ತಮ್ಮ ಅನುಭವ ಹಾಗೂ ನೋವನ್ನು ಹಂಚಿಕೊಂಡಿರುವ ಅನ್ಸಾರಿಯವರು, ಯುವಕರಿಗೆ ಕಿವಿಮಾತು ಹೇಳಿದ್ದಾರೆ. 
ಫೇಸ್ ಬುಕ್ ಮೂಲಕ ನಾನು ಪಾಕಿಸ್ತಾನ ಮೂಲಕ ಯುವತಿಯ ಪ್ರೀತಿಯಲ್ಲಿ ಬಿದ್ದಿದ್ದೆ. ಬಳಿಕ ಆಕೆಗೆ ಬಲವಂತದಿಂದ ವಿವಾಹ ಮಾಡಲಾಗುತ್ತಿದೆ ಎಂಬ ವಿಚಾರ ತಿಳಿದು, ಆಕೆಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದೆ. ಬಳಿಕ ನಾನು ಅಲ್ಲಿ ಬಂಧನಕ್ಕೊಳಗಾಗಿದ್ದೆ. ಪೋಷಕರ ಬಳಿ ಯಾವುದನ್ನೂ ಮುಚ್ಚಿಡಬೇಕಿ. ಸಂದಿಗ್ಧ ಸಮಯದಲ್ಲಿ ನಮ್ಮೊಂದಿಗೆ ನಿಲ್ಲುವುದು ಕೇವಲ ಪೋಷಕರು ಮಾತ್ರ. ವಿದೇಶಕ್ಕೆ ಅಥವಾ ಯಾವುದೇ ಸ್ಥಳಕ್ಕೆ ಹೋಗಲು ಅಕ್ರಮ ಮಾರ್ಗ ಅಥವಾ ವಿಧಾನಗಳನ್ನು ಬಳಸಬೇಡಿ. ಪ್ರೀತಿಗೆ ಬಿದ್ದ ಸಂದರ್ಭದಲ್ಲಿ ಕಠಿಣ ಸವಾಲುಗಳನ್ನು ಎದುರು ಹಾಕಿಕೊಳ್ಳಬೇಡಿ. ಫೇಸ್ ಬುಕ್ ನಂಬಿ ಎಂದಿಗೂ ಪ್ರೀತಿಯಲ್ಲಿ ಬೀಳದಿರಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT