ಅರುಣ್ ಜೇಟ್ಲಿ- ಕುಮಾರಸ್ವಾಮಿ ಭೇಟಿ: ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆ ಕೋರಿದ ಸಿಎಂ
ನವದೆಹಲಿ: ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.27 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ನೀಡಲಾಗುತ್ತಿರುವ ಜಿಎಸ್ ಟಿ ಪರಿಹಾರ ಅವಧಿಯನ್ನು 2025 ವರೆಗೆ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಜಿಎಸ್ ಟಿ ಜಾರಿಯ ನಂತರ ರಾಜ್ಯದ ಆದಾಯ ಕೊರತೆ ಶೇ.20 ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ಜಿಎಸ್ ಟಿ ಪರಿಹಾರ ಅವಧಿಯನ್ನು 2025 ವರೆಗೆ ವಿಸ್ತರಿಸಬೇಕೆಂದು ಅರುಣ್ ಜೇಟ್ಲಿಗೆ ಸಿಎಂ ಮನವಿ ಮಾಡಿದ್ದಾರೆ.
ಪ್ರಸ್ತುತ ಜಿಎಸ್ ಟಿ ಜಾರಿಯಾದ 5 ವರ್ಷಗಳ ವರೆಗೆ ರಾಜ್ಯಗಳಿಗೆ ಪರಿಹಾರ ನೀಡಲಾಗುತ್ತಿದ್ದು 2022 ವರೆಗೆ ಪರಿಹಾರ ಸಿಗಲಿದೆ. ರಾಜ್ಯಕ್ಕೆ ಜಿಎಸ್ ಟಿಯಿಂದ ಉಂಟಾಗಿರುವ ನಷ್ಟ 2022 ರ ನಂತರವೂ ಮುಂದುವರೆಯಲಿದ್ದು, ಹಲವು ಯೋಜನೆಗಳ ಜಾರಿಗೆ ಅಡ್ಡಿಯಾಗಲಿದೆ ಎಂದು ಜೇಟ್ಲಿ ಬಳಿ ಕುಮಾರಸ್ವಾಮಿ ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos