ದೇಶ

ಮುಸ್ಲಿಂ ಪುರುಷರನ್ನು ದಂಡಿಸುವುದು ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ: ಕಾಂಗ್ರೆಸ್ ಸಂಸದೆ

Srinivas Rao BV
ನವದೆಹಲಿ: ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ ಮುಸ್ಲಿಂ ಪುರುಷರನ್ನು ದಂಡನೆಗೆ ಗುರಿ ಮಾಡುವುದಾಗಿದೆ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಹೇಳಿದ್ದಾರೆ. 
ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಕಾಪಾಡುವುದು ಮಸೂದೆಯ ಉದ್ದೇಶವಲ್ಲ. ಈಗಿನ ಸ್ವರೂಪದ ಮಸೂದೆಯ ಪ್ರಕಾರ ತ್ರಿವಳಿ ತಲಾಖ್ ನ ಉದ್ದೇಶವಿರುವುದು  ಮುಸ್ಲಿಂ ಪುರುಷರನ್ನು ದಂಡಿಸುವುದಷ್ಟೇ ಎಂದು ಹೇಳಿದ್ದಾರೆ. 
ತ್ರಿವಳಿ ತಲಾಖ್ ನ್ನು ಕ್ರಿಮಿನಲ್ ಅಪರಾಧನವನ್ನಾಗಿ ಮಾಡುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದದ್ದು, ಆದ್ದರಿಂದ ಮಸೂದೆಯನ್ನು ಸಂಸತ್ ನ ಜಂಟಿ ಆಯ್ಕೆ ಸಮಿತಿಗೆ ವರ್ಗಾವಣೆ ಮಾಡಬೇಕೆಂದು ಸುಷ್ಮಿತಾ ದೇವ್ ಆಗ್ರಹಿಸಿದ್ದಾರೆ. 
SCROLL FOR NEXT