ದೇಶ

ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಸರಣಿ ಅಪಘಾತ: ಹರ್ಯಾಣದಲ್ಲಿ 7 ಸಾವು

Shilpa D
ಅಂಬಾಲಾ: ದಟ್ಟವಾದ ಮಂಜು ಕವಿದ ವಾತಾವರಣದಿಂದಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 7 ಮಂದಿ ಸಾವನ್ನಪ್ಪಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಅಂಬಾಲಾ- ಚಂಡಿಗಡ ರಾಷ್ಚ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ, ಚಂಡಿಗಡ ಕಡೆಯಿಂದ ಬರುತ್ತಿದ್ದ ಎರಡು ಕಾರುಗಳು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿವೆ.
ನಂತರ ಒಂದಕ್ಕೊಂದು ಸರಣಿ ಡಿಕ್ಕಿಯಾಗಿ ಹಲವು ವಾಹನಗಳು ಜಖಂ ಗೊಂಡಿದ್ದು 7 ಮಂದಿ ಸಾವನ್ನಪ್ಪಿದ್ದಾರೆ.ಮೃತರೆಲ್ಲಾ ಚಂಡಿಗಡ ನಿವಾಸಿಗಳಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
SCROLL FOR NEXT