ಸುಪ್ರೀಂಕೋರ್ಟಿನ ಸಾಂದರ್ಭಿಕ ಚಿತ್ರ 
ದೇಶ

ಕಾಪ್ ಪಂಚಾಯಿತಿಗಳು ಸ್ವಯಂ ಘೋಷಿತ ನೈತಿಕ ಪೊಲೀಸರಲ್ಲ: ಸುಪ್ರೀಂಕೋರ್ಟ್

ತಮ್ಮಿಷ್ಟ ಬಂದ ಹಾಗೆ ಕಾನೂನು ಜಾರಿಗೊಳಿಸುವ ಮೂಲಕ ಮಾರ್ಯಾದಾ ಹತ್ಯೆಗಳನ್ನು ಪೋಷಿಸುತ್ತಿರುವ ಕಾಪ್ ಪಂಚಾಯಿತಿಗಳಂತಹ ಸಂಸ್ಥೆಗಳಿಂದ ದಂಪತಿಗಳನ್ನು ರಕ್ಷಿಸುವಂತೆ ಕೇಂದ್ರಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ನವದೆಹಲಿ : ತಮ್ಮಿಷ್ಟ ಬಂದ ಹಾಗೆ ಕಾನೂನು ಜಾರಿಗೊಳಿಸುವ ಮೂಲಕ ಮಾರ್ಯಾದಾ ಹತ್ಯೆಗಳನ್ನು ಪೋಷಿಸುತ್ತಿರುವ ಕಾಪ್ ಪಂಚಾಯಿತಿಗಳಂತಹ ಸಂಸ್ಥೆಗಳಿಂದ ದಂಪತಿಗಳನ್ನು ರಕ್ಷಿಸುವಂತೆ ಕೇಂದ್ರಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಕಾಪ್ ಪಂಚಾಯಿತಿಗಳು ಸ್ವಯಂ ಘೋಷಿತ ನೈತಿಕ ಕಾವಲುಗಾರರಲ್ಲ, ಇಂತಹ ವಿಚಾರಗಳಲ್ಲಿ ಕಾಪ್ ಪಂಚಾಯಿತಿಗಳ ಕಪಿಮುಷ್ಠಿಗೆ ಸಿಲುಕಿಕೊಂಡಿರುವ ದಂಪತಿಗಳನ್ನು ರಕ್ಷಿಸಲು ಕೇಂದ್ರಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಮಾರ್ಯಾದಾ ಹತ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆಗಿನ ಮಾರ್ಗಸೂತ್ರಕ್ಕಾಗಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದ್ದು, ಜಾತಿ. ಸಮಾಜ, ಕಾಪ್ ಪಂಚಾಯಿತಿ ಹೊರತಾಗಿ ವಿವಾಹವಾದ ದಂಪತಿಗಳ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್  ಕಳೆದ ತಿಂಗಳು ಹೇಳಿತ್ತು,

ವಯಸ್ಕ ಪುರುಷ ಹಾಗೂ ಮಹಿಳೆ ಪರಸ್ಪರ ಒಪ್ಪಿ ವಿವಾಹವಾದನಂತರ ಅವರನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ.  ಕಾಪ್ ಅಥವಾ ಸಂಬಂಧಿತ ಸಮುದಾಯವೂ ಪ್ರಶ್ನಿಸಬಾರದು,ಅಂತಹ ದಂಪತಿಗಳ ಮೇಲೆ ಏಲ್ಲಿಯಾದರೂ  ಸಾಮೂಹಿಕ ದಾಳಿ ನಡೆದ್ದರೆ ಅದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹೇಳಿದ್ದಾರೆ.



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಇದೆಂಥಾ ಕ್ರೌರ್ಯ: ಮದ್ಯ ಮಾರಾಟ ನಿಷೇಧ ಉಲ್ಲಂಘಿಸಿದ್ದ ಬ್ರಾಹ್ಮಣನ ಟೀಕಿಸಿ ಪೋಸ್ಟ್; OBC ವ್ಯಕ್ತಿಗೆ ಅದೇ ಬ್ರಾಹ್ಮಣನ ಪಾದ ತೊಳೆದು ನೀರು ಕುಡಿಯುವ ಶಿಕ್ಷೆ!

ಗುಜರಾತ್‌ನಲ್ಲಿ ಎಎಪಿ ರೈತರ ರ್ಯಾಲಿಯಲ್ಲಿ ಹಿಂಸಾಚಾರ; ಕಲ್ಲು ತೂರಿದ ರೈತರು, 3 ಪೊಲೀಸರಿಗೆ ಗಾಯ

SCROLL FOR NEXT