ದತ್ತು ಪಡೆದ ಅನಾಥ ಹಿಂದು ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿದ ಮುಸ್ಲಿಂ ಕುಟುಂಬ 
ದೇಶ

ದತ್ತು ಪಡೆದ ಅನಾಥ ಹಿಂದು ಪುತ್ರನಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ ಮುಸ್ಲಿಂ ಕುಟುಂಬ

ದತ್ತು ಪಡೆದಿದ್ದ ಹಿಂದೂ ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಕುಟುಂಬವೊಂದು ವಿವಾಹ ಮಾಡಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ನಡೆದಿದೆ...

ಡೆಹ್ರಾಡೂನ್ (ಉತ್ತರಾಖಂಡ): ದತ್ತು ಪಡೆದಿದ್ದ ಹಿಂದೂ ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಕುಟುಂಬವೊಂದು ವಿವಾಹ ಮಾಡಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ನಡೆದಿದೆ. 
ಅನಾಥನಾಗಿದ್ದ ರಾಕೇಶ್ ಅವರು 12 ವರ್ಷದ ಬಾಲಕನಾಗಿದ್ದಾಗ ಮೌನುದ್ದೀನ್ ಅವರ ಕುಟುಂಬ ದತ್ತು ಪಡೆದುಕೊಂಡಿತ್ತು. ಆದರೆ, ಮನೆಯಲ್ಲಿ ರಾಕೇಶ್ ಗೆ ಯಾವುದೇ ಧಾರ್ಮಿಕ ಕಟ್ಟು-ಪಾಡುಗಳನ್ನು ವಿಧಿಸಿರಲಿಲ್ಲ. 
ಬಳಿಕ ಮೌನುದ್ದೀನ್ ಕುಟುಂಬದವರು ರಾಕೇಶ್ ಅವರಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿ ಕೋಮು ಸೌಹಾರ್ದತೆಯನ್ನು ಸಾರಿದ್ದಾರೆ. ಫೆ.9 ರಂದು ಸೋನಿ ಎಂಬ ಯುವತಿಯೊಂದಿಗೆ ರಾಕೇಶ್ ಅವರು ಸಪ್ತಪದಿ ತುಳಿದಿದ್ದಾರೆ. ರಾಕೇಶ್ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ಮಾಡಿಸಿ ಮೌನುದ್ದೀನ್ ಅವರು ಸೊನೆಯನ್ನು ಮನೆ ತುಂಬಿಸಿಕೊಂಡಿದ್ದಾರೆ. 
ಹೋಳಿ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳನ್ನು ನಾನು ಇದೇ ಮನೆಯಲ್ಲಿಯೇ ಆಚರಿಸುತ್ತಿದ್ದೇನೆ. ಮದುವೆ ಸೇರಿದಂತೆ ಪ್ರತೀಯೊಂದು ಹಂತದಲ್ಲಿಯೂ ನನ್ನ ಕುಟುಂಬ ನನಗೆ ಬೆಂಬಲ ನೀಡಿದೆ. ಪ್ರೋತ್ಸಾಹ ನೀಡಿದೆ. ನಾನು ಮುಸ್ಲಿಂ ಕುಟುಂಬದಲ್ಲಿ ವಾಸಿಸುತ್ತಿದ್ದೇನೆಂಬ ಭಾವನೆಯೇ ನನಗಿಲ್ಲ. ನನ್ನ ಪೂಜಾ ಕಾರ್ಯಗಳಿಗೆ ಮನೆಯಲ್ಲಿ ಯಾರೂ ನಿರ್ಬಂಧ ಹೇರಿಲ್ಲ ಎಂದು ರಾಕೇಶ್ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT