ದೇಶ

ಮಣಿಶಂಕರ್ ಅಯ್ಯರ್ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ದೂರು ದಾಖಲು

Nagaraja AB

ನವದೆಹಲಿ:  ಪಾಕಿಸ್ತಾನ ಕುರಿತು  ಹೇಳಿಕೆ ನೀಡಿರುವ ಕಾಂಗ್ರೆಸ್ ಉಚ್ಛಾಟಿತ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ ವಕೀಲ ಹಾಗೂ ಬಿಜೆಪಿ ನಾಯಕ ಅಜಯ್ ಅಗರ್ ವಾಲ್  ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ನೀಚ ಎಂದು ಕರೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಣಿಶಂಕರ್ ಅಯ್ಯರ್ ಅವರನ್ನು ಉಚ್ಛಾಟಿಸಲಾಗಿದೆ.

ಭಾರತದಿಂದ ಹೆಚ್ಚಿನ ದ್ವೇಷಕ್ಕೊಳಗಾದರೂ ಪಾಕಿಸ್ತಾನದಲ್ಲಿ ಪ್ರೀತಿ ಸಿಕ್ಕಿದೆ. ಕರಾಚಿಯಲ್ಲಿ  ಸಂತೋಷವಾಗಿದ್ದೇನೆ ಎಂದು ಮಣಿಶಂಕರ್ ಅಯ್ಯರ್ ಕರಾಚಿ ಸಾಹಿತ್ಯೋತ್ಸವದಲ್ಲಿ  ಹೇಳಿದ್ದರು.

ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಮಣಿಶಂಕರ್ ಅಯ್ಯರ್ ಅವರನ್ನು ಬಂಧಿಸುವಂತೆ ದೂರು ನೀಡಿದೆ.

SCROLL FOR NEXT