ರಾಂಚಿ: ಮಾಟವಿದ್ಯೆ ಅಭ್ಯಾಸಕ್ಕಾಗಿ ಮಾನವನ ತಲೆ ಮಾಂಸವನ್ನು ತಿನ್ನುವಂತೆ ಒತ್ತಾಯ, ದೂರು ದಾಖಲು
ರಾಂಚಿ (ಜಾಂರ್ಖಂಡ್): ಮಾಟ ಮಂತ್ರಗಳ ವಿದ್ಯೆ ಕಲಿಯುವ ಸಲುವಾಗಿ ತರಬೇತಿ ಪಡೆಯುತ್ತಿದ್ದ ಓರ್ವ ತಾಯಿ ಹಾಗೂ ಮಗಳಳಿಗೆ ಗ್ರಾಮಸ್ಥರು ಮಾನವರ ಮಲವನ್ನು ಬಲವಂತವಾಗಿ ತಿನ್ನಿಸಿದ ಘಟನೆ ನಡೆದಿದೆ.
ಫೆಬ್ರುವರಿ 16ರಂದು ರಾಂಚಿಯ ಸೋನಾಹತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದುಳಮಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು ಆರೋಪಿಗಳ ವಿರುದ್ಧ ಸಂತ್ರಸ್ತರು ದೂರನ್ನು ದಾಖಲಿಸಿದ್ದಾರೆ.
"ಮಹಿಳೆ ಮತ್ತು ಇತರೆ ಆರು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಅವರುಗಳು ಮಂತ್ರವಿದ್ಯೆ ಕಲಿಸುವಇವರು ಗ್ರಾಮದಲ್ಲಿ ದುಷ್ಟ ಶಕ್ತಿಗಳನ್ನು ಬಳಸಿ ಕೆಟ್ಟ ಕೆಲಸ ನಡೆಸಿದ್ದರೆಂದು ಅವರಿಗೆ ಗ್ರಾಮಸ್ಥರೇ ಮಲ ತಿನ್ನಿಸಿ, ಕೇಶ ಮುಂಡನ ಮಾಡಿಸಿದ್ದಾರೆ.. . ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ" ಎಸ್ ಎಚ್ ಓ ಸುಜಿತ್ ರಾಯ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos