ದೇಶ

ಸಿಎಂ ಪಟ್ನಾಯಕ್ ಮೇಲೆ ಶೂ ಎಸೆತ: ಕೆಲವರ ಪ್ರಚೋದನೆಯಿಂದ ಶೂ ಎಸೆದೆ; ಆರೋಪಿ ಹೇಳಿಕೆ

Shilpa D
ಒಡಿಸಾ:  ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್  ಅವರ ಮೇಲೆ ಶೂ ಎಸೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಶೂ ಎಸೆದ ಆರೋಪಿ ಕಾರ್ತಿಕ್ ಮೆಹರ್ ನನ್ನು ಪೊಲೀಸರು ಬಂಧಿಸಿದ್ದು, ಕೆಲವರ ಪ್ರಚೋದನೆಯಿಂದಾಗಿ ನಾನು ಶೂ ಎಸೆದೆ ಎಂದು ಹೇಳಿದ್ದಾನೆ,
ಶೂ ಎಸೆಯುವಂತೆ ಯಾರು ಪ್ರಚೋದನೆ ನೀಡಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್ ಅವರ ಹೆಸರನ್ನು ಹೇಳಲು ನಿರಾಕರಿಸಿದ್ದಾನೆ, ಮೂರು ಮಂದಿ  ನನ್ನನ್ನು ಪ್ರಚೋದಿಸಿದ್ದಾರೆ, ಅವರು ಬಿಜೆಪಿಯವರು ಇರಬಹುದು, ಬಿಜೆಡಿ ಪಕ್ಷದವರಿರಬಹುದು, ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷದವರೇ ಇರಬಹುದು, ನಾನು ಏಕೆ ಅವರ ಗುರುತನ್ನು ಹೇಳಲಿ ಎಂದು ಪ್ರಶ್ನಿಸಿದ್ದಾನೆ.
ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಲ್ಲ, ರಾಜಕೀಯ ನಾಯಕರು ಏಕೆ ಇಲ್ಲಿಗೆ ಬಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬೇಕು.  ಸಾರ್ವಜನಿಕರು ತಮಗೆ ಬೇಕಾದವರಿಗೆ ವೋಟು ನೀಡಿ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದ್ದಾನೆ. ಬಾರ್ಗಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಪಟ್ನಾಯಕ್ ಮೇಲೆ ಶೂ ಎಸೆಯಲಾಗಿತ್ತು.  ನಂತರ ಆರೋಪಿಯನ್ನು ನೆರೆದಿದ್ದ ಜನ ಥಳಿಸಿದ್ದರು. 
SCROLL FOR NEXT