ನವದೆಹಲಿ: ಮುಂಬೈನಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಒಂದು ದಿನದ ಬಳಿಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೇಂದ್ರ ಸರ್ಕಾರ ನನ್ನ ಮೇಲೆ ವ್ಯಥಾ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಡಿಸೆಂಬರ್ 31 ರಂದು "ಪ್ರಚೋದನಕಾರಿ ಭಾಷಣ" ದಲ್ಲಿ "ಕೋಮು ಸೌಹಾರ್ದವನ್ನು ಕೆಡಿಸುವ ಅಂಶಗಳಿದೆ " ಎಂದು ಆರೋಪಿಸಿ ಪುಣೆ ಪೊಲೀಸರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದರೆ ನನ್ನ ಯಾವ ಮಾತುಗಳಲ್ಲಿಯೂ ಪ್ರಚೋದನಾಕಾರಿ ಅಂಶಗಳಿರಲಿಲ್ಲ ಎಂದು ಮೇವಾನಿ ಹೇಳಿದ್ದಾರೆ.
"ಸಂಘ ಪರಿವಾರ ಮತ್ತು ಬಿಜೆಪಿ ಸದಸ್ಯರು ನನ್ನ ಹೆಸರನ್ನು ಹಾಳು ಮಾಡಲು ಮತ್ತು ಜನಪ್ರಿಯತೆಯನ್ನು ಕೆಡಿಸಲು ಬಾಲಿಶ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅದು ಗುಜರಾತ್ ಫಲಿತಾಂಶದ ನಂತರದ ಹೆಚ್ಚಾಗಿದೆ. 2019ರ ಚುನಾವಣೆಗಳ ಬಗೆಗೆ ಅವರು ಭೀತಿಯನ್ನು ಹೊಂದಿದ್ದಾರೆ. ನನ್ನ ಮಾತಿನ ಒಂದೇ ಒಂದು ಪದವೂ ಪ್ರಚೋದನಾಕಾರಿಯಾಗಿರಲಿಲ್ಲ, ನನ್ನ ಮೇಲೆ ವ್ಯಥಾ ದಾಳಿಯಾಗುತ್ತಿದೆ." ನವದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮೇವಾನಿ ಹೇಳಿದ್ದಾರೆ.
"ನಾನು ಚುನಾಯಿತ ಪ್ರತಿನಿಧಿಯಾಗಿದ್ದೇನೆ. ಬಿಜೆಪಿ ನನನ್ನು ಕಂಡು ಭಯಪಡುತ್ತಿದೆ. ನಮಗೆ ಜಾತ್ಯಾತೀತ ಭಾರತ ಬೇಕು. ದಲಿತರಿಗೆ ಪ್ರತಿಭಟನೆಯ ಹಕ್ಕಿದೆ, " ಅವರು ಭೀಮಾ ಕೋರೆಗಾಂವ್ ಹಿಂಸಾಚಾರವನ್ನು ನಾನು ಪ್ರಚೋದಿಸಿದ್ದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಾನಲ್ಲಿಗೆ ತೆರಳಲೇ ಇಲ್ಲ." ಮೇವಾನಿ ಹೇಳಿದರು.
ಭೀಮಾ ಕೋರೆಗಾಂವ್ ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮೋದಿಯವರ ನಿಲುವೇನು? ದಲಿತರ ಮೇಲಿನ ದಾಳಿಗಳು ಹೀಗೆಯೇ ಮುಂದುವರಿದರೆ 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ದಲಿತರೇ ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಮೇವಾನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos