ವೈರಮುತ್ತು 
ದೇಶ

ಹಿಂದೂ ದೇವತೆ ವಿರುದ್ಧ ಹೇಳಿಕೆ ವಿವಾದ: ತಮಿಳು ಗೀತರಚನಕಾರ ವೈರಮುತ್ತು ವಿರುದ್ಧ ಕೇಸ್

ಹಿಂದೂ ದೇವತೆ ಶ್ರೀವಿಲ್ಲಿಪುತ್ತೂರು ಕವಯಿತ್ರಿ ಆಂಡಾಳ್ ವಿರುದ್ಧ ಹೇಳಿಕೆ ನೀಡಿದ್ದ ಗೀತರಚನಕಾರ ವೈರಮುತ್ತು ವಿರುದ್ಧ ದೂರು ದಾಖಲಾಗಿದೆ...

ರಾಜಪಾಳಯಂ(ತಮಿಳುನಾಡು): ಹಿಂದೂ ದೇವತೆ ಶ್ರೀವಿಲ್ಲಿಪುತ್ತೂರು ಕವಯಿತ್ರಿ ಆಂಡಾಳ್ ವಿರುದ್ಧ ಹೇಳಿಕೆ ನೀಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಗೀತರಚನಕಾರ ವೈರಮುತ್ತು ವಿರುದ್ಧ ದೂರು ದಾಖಲಾಗಿದೆ. 
ಕವಯಿತ್ರಿ ಆಂಡಾಳ್ ಕುರಿತಾಗಿ ಚರ್ಚೆ ವೇಳೆ ತಮಿಳು ಗೀತರಚನಕಾರ ವೈರಮುತ್ತು ಅವರು ಆಂಡಾಳ್ ದೇವದಾಸಿ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದು ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು ವೈರಮುತ್ತು ವಿರುದ್ಧ ಕೇಸ್ ದಾಖಲಾಗಿದೆ. 
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ವಿದ್ವಾಂಸ ಸುಭಾಷ್ ಮಲಿಕ್ ಅಧ್ಯಯನದಲ್ಲಿ ಆಂಡಾಳ್ ದೇವದಾಸಿ ಸಮುದಾಯಕ್ಕೆ ಸೇರಿದವರು ಮತ್ತು ತಿರುಚಿರಾಪಳ್ಳಿಯ ಶ್ರೀರಂಗಂ ದೇವಾಲಯದಲ್ಲಿ ನೆಲೆಸಿದ್ದರು ಮತ್ತು ಅಲ್ಲೇ ಮಡಿದರು ಎಂಬ ವಿವರವನ್ನು ಉಲ್ಲೇಖಿಸಿದ್ದರು. 
ವೈರಮುತ್ತು ಅವರ ಹೇಳಿಕೆಯಿಂದ ಬೇಸರಗೊಂಡಿರುವ ಶ್ರೀ ಆಂಡಾಳ್ ದೇವಿಯ ಭಕ್ತ ಸೂರಿ ಎಂಬುವರು ವೈರಮುತ್ತು ವಿರುದ್ಧ ದೂರು ದಾಖಲಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT