ಬೆಂಜಮಿನ್ ನೇತನ್ಯಾಹು 
ದೇಶ

ಅಂತಾರಾಷ್ಟ್ರೀಯ ಗಡಿದಾಟಿ ಉಗ್ರರನ್ನು ಸಂಹರಿಸುವ ಹಕ್ಕು ಭಾರತಕ್ಕಿದೆ: ನೇತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಉಗ್ರರನ್ನು ಅಂತಾರಾಷ್ಟ್ರೀಯ ಗಡಿದಾಟಿ ಏಕಪಕ್ಷೀಯ...

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಉಗ್ರರನ್ನು ಅಂತಾರಾಷ್ಟ್ರೀಯ ಗಡಿದಾಟಿ ಏಕಪಕ್ಷೀಯ ದಾಳಿ ನಡೆಸುವ ಅಧಿಕಾರ ಭಾರತಕ್ಕಿದೆ ಎಂದು ಹೇಳಿದ್ದಾರೆ. 
ಟೈಮ್ಸ್ ನೌಗೆ ನೀಡಿದ ಸಂದರ್ಶನಲ್ಲಿ ಅಂತಾರಾಷ್ಟ್ರೀಯ ಗಡಿದಾಟಿ ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಮುಂದಾದರೆ ಇಸ್ರೇಲ್ ಬೆಂಬಲಿಸುತ್ತಾ ಎಂದು ಕೇಳಿ ಪ್ರಶ್ನೆಗೆ ಉತ್ತರಿಸಿದ ನೇತನ್ಯಾಹು. ನಾವು ಪರಸ್ಪರ ತಿಳುವಳಿಕೆ ಹೊಂದಿದ್ದೇವೆ. ಇದಕ್ಕಿಂತ ಹೆಚ್ಚೇನೂ ನಾನು ಹೇಳಬೇಕಿಲ್ಲ ಅಂದುಕೊಳ್ಳುತ್ತೇನೆ. ಭಾರತ ಇಸ್ರೇಲ್ ಪಾಲುದಾರಿಕೆಗಳು ಯಾವುದೇ ಒಂದು ನಿರ್ದಿಷ್ಟ ದೇಶದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು. 
ಬೆಂಜಮಿನ್ ನೇತನ್ಯಾಹು ಅವರು ನಾವು ಪಾಕಿಸ್ತಾನದ ಶತ್ರುಗಳಲ್ಲ. ಪಾಕಿಸ್ತಾನವೂ ನಮ್ಮ ಶತ್ರುವಾಗಿರಬಾರದು ಎಂದು ಹೇಳಿದರು. ಇನ್ನು ಪ್ಯಾಲೇಸ್ತೀನ್ ವಿಚಾರವಾಗಿ, ಇಸ್ರೇಲ್ ಒಂದು ಪರಿಪೂರ್ಣ ರಾಷ್ಟ್ರವೆಂದು ಹೇಳಿಕೊಳ್ಳಲು ಆಗುವುದಿಲ್ಲ. ಸಮಸ್ಯೆಗಳಿಲ್ಲದ ಯಾವುದೇ ದೇಶವೂ ಜಗತ್ತಿನಲ್ಲಿಲ್ಲ. ಆದರೆ ನಮ್ಮ ನೆರೆಯ ದೇಶಗಳ ಜತೆ ಸ್ನೇಹ ಹಸ್ತವನ್ನು ಚಾಚಿದ್ದೇವೆ ಎಂದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT