ಬೆಂಜಮಿನ್ ನೇತನ್ಯಾಹು 
ದೇಶ

ಅಂತಾರಾಷ್ಟ್ರೀಯ ಗಡಿದಾಟಿ ಉಗ್ರರನ್ನು ಸಂಹರಿಸುವ ಹಕ್ಕು ಭಾರತಕ್ಕಿದೆ: ನೇತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಉಗ್ರರನ್ನು ಅಂತಾರಾಷ್ಟ್ರೀಯ ಗಡಿದಾಟಿ ಏಕಪಕ್ಷೀಯ...

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಉಗ್ರರನ್ನು ಅಂತಾರಾಷ್ಟ್ರೀಯ ಗಡಿದಾಟಿ ಏಕಪಕ್ಷೀಯ ದಾಳಿ ನಡೆಸುವ ಅಧಿಕಾರ ಭಾರತಕ್ಕಿದೆ ಎಂದು ಹೇಳಿದ್ದಾರೆ. 
ಟೈಮ್ಸ್ ನೌಗೆ ನೀಡಿದ ಸಂದರ್ಶನಲ್ಲಿ ಅಂತಾರಾಷ್ಟ್ರೀಯ ಗಡಿದಾಟಿ ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಮುಂದಾದರೆ ಇಸ್ರೇಲ್ ಬೆಂಬಲಿಸುತ್ತಾ ಎಂದು ಕೇಳಿ ಪ್ರಶ್ನೆಗೆ ಉತ್ತರಿಸಿದ ನೇತನ್ಯಾಹು. ನಾವು ಪರಸ್ಪರ ತಿಳುವಳಿಕೆ ಹೊಂದಿದ್ದೇವೆ. ಇದಕ್ಕಿಂತ ಹೆಚ್ಚೇನೂ ನಾನು ಹೇಳಬೇಕಿಲ್ಲ ಅಂದುಕೊಳ್ಳುತ್ತೇನೆ. ಭಾರತ ಇಸ್ರೇಲ್ ಪಾಲುದಾರಿಕೆಗಳು ಯಾವುದೇ ಒಂದು ನಿರ್ದಿಷ್ಟ ದೇಶದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು. 
ಬೆಂಜಮಿನ್ ನೇತನ್ಯಾಹು ಅವರು ನಾವು ಪಾಕಿಸ್ತಾನದ ಶತ್ರುಗಳಲ್ಲ. ಪಾಕಿಸ್ತಾನವೂ ನಮ್ಮ ಶತ್ರುವಾಗಿರಬಾರದು ಎಂದು ಹೇಳಿದರು. ಇನ್ನು ಪ್ಯಾಲೇಸ್ತೀನ್ ವಿಚಾರವಾಗಿ, ಇಸ್ರೇಲ್ ಒಂದು ಪರಿಪೂರ್ಣ ರಾಷ್ಟ್ರವೆಂದು ಹೇಳಿಕೊಳ್ಳಲು ಆಗುವುದಿಲ್ಲ. ಸಮಸ್ಯೆಗಳಿಲ್ಲದ ಯಾವುದೇ ದೇಶವೂ ಜಗತ್ತಿನಲ್ಲಿಲ್ಲ. ಆದರೆ ನಮ್ಮ ನೆರೆಯ ದೇಶಗಳ ಜತೆ ಸ್ನೇಹ ಹಸ್ತವನ್ನು ಚಾಚಿದ್ದೇವೆ ಎಂದು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT