ಅರುಣ್ ಜೇಟ್ಲಿ 
ದೇಶ

ಸಿಬಿಎಫ್ ಸಿ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ: ಅರುಣ್ ಜೇಟ್ಲಿ

ತೆರಿಗೆ ಪಾವತಿ ತಪ್ಪಿಸುವಿಕೆಯನ್ನು ಪತ್ತೆಹಚ್ಚಲು ಮತ್ತು ವ್ಯಾಪಾರದ ಅನುಕೂಲಕ್ಕಾಗಿ ಕೇಂದ್ರ ....

ನವದೆಹಲಿ: ತೆರಿಗೆ ಪಾವತಿ ತಪ್ಪಿಸುವಿಕೆಯನ್ನು ಪತ್ತೆಹಚ್ಚಲು ಮತ್ತು ವ್ಯಾಪಾರದ ಅನುಕೂಲಕ್ಕಾಗಿ ಕೇಂದ್ರ ತೆರಿಗೆ ಮತ್ತು ಸುಂಕ(ಸಿಬಿಎಫ್ ಸಿ)ಮಂಡಳಿ ಅವಳಿ ಸವಾಲುಗಳನ್ನು ಈಡೇರಿಸಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ತೆರಿಗೆ ಇಲಾಖೆ ಎರಡು ಪ್ರಮುಖ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ. ತೆರಿಗೆ ಪಾವತಿ ತಪ್ಪಿಸುವುದನ್ನು ಪತ್ತೆಹಚ್ಚುವುದು ಮತ್ತು ಹೊರರಾಜ್ಯಗಳು ಮತ್ತು ಹೊರದೇಶಗಳಿಂದ ನಮ್ಮ ದೇಶಕ್ಕೆ ಸುಲಭವಾಗಿ ಬಂದು ವ್ಯಾಪಾರ ಆರಂಭಿಸಲು ಅನುಕೂಲ ಮಾಡಿಕೊಡಬೇಕು ಎಂದು ಜೈಟ್ಲಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಹೂಡಿಕೆ ಸಮಾರಂಭ ಮತ್ತು ಅಂತರರಾಷ್ಟ್ರೀಯ ತೆರಿಗೆ ದಿನ-2018ರಲ್ಲಿ ಮಾತನಾಡಿದರು.
ದೇಶೀಯ ಮತ್ತು ಅಂತರರಾಷ್ಟ್ರೀಯ ತೆರಿಗೆ ವ್ಯವಹಾರಗಳಲ್ಲಿ ತರ್ಕಬದ್ಧತೆಯಿದ್ದು ಹಲವು ವಸ್ತುಗಳು ಭಾರತದಲ್ಲಿಯೇ ಸಿಗುವಂತಹ ವಾತಾವರಣ ಮೂಡಬೇಕು. ಅದು ಮೇಕ್ ಇನ್ ಇಂಡಿಯಾ ಅಭಿಯಾನ ಮೂಲಕ ಸಾಧ್ಯ ಎಂದು ಜೇಟ್ಲಿ ಸಾರಿದರು.
ತೆರಿಗೆ ಇಲಾಖೆಯ ಕಾರ್ಯಶೈಲಿ ಮತ್ತು ಪಾತ್ರ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ತೆರಿಗೆ ಪಾವತಿ ತಪ್ಪಿಸಿಕೊಳ್ಳುವುದನ್ನು ಪತ್ತೆಹಚ್ಚುವುದು, ವ್ಯಾಪಾರಕ್ಕೆ ಹೊರಗಿನವರಿಗೆ ಸೌಕರ್ಯ ಮಾಡಿಕೊಡುವುದು ಇತ್ತೀಚಿನ ಅಗತ್ಯವಾಗಿದೆ. ವ್ಯಾಪಾರಕ್ಕೆ ಹೆಚ್ಚು ಸುಗಮ ಮಾಡಿಕೊಟ್ಟಷ್ಟೂ ವೆಚ್ಚ ಕಡಿತಕ್ಕೆ ಹೆಚ್ಚು ಅವಕಾಶಗಳಿರುತ್ತವೆ ಎಂದರು.
ವ್ಯಾಪಾರ ಮತ್ತು ತೆರಿಗೆ ಮತ್ತು ಅಬಕಾರಿ ಇಲಾಖೆ ಮಧ್ಯೆ ಪರಿಣಾಮಕಾರಿ ಸಂವಹನಕ್ಕೆ ಎರಡು ಪ್ರಮುಖ ಸಾಧನಗಳಾದ ಐಸಿಇಟಿಎಬಿ ಮತ್ತು ಐಸಿಇಟಿಆರ್ಎಕೆ ನ್ನು ಉದ್ಘಾಟಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT