ನಟ ಶಾರುಕ್ ಖಾನ್ (ಸಂಗ್ರಹ ಚಿತ್ರ) 
ದೇಶ

ನಟ ಶಾರುಕ್ ಖಾನ್ ರ ಐಶಾರಾಮಿ ಬಂಗಲೆ 'ಜಪ್ತಿ' ಮಾಡಿದ ಆದಾಯ ತೆರಿಗೆ ಇಲಾಖೆ!

ಅಕ್ರಮ ವಹಿವಾಟಿನ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರ ಐಶಾರಾಮಿ ಬಂಗಲೆಯನ್ನು ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ: ಅಕ್ರಮ ವಹಿವಾಟಿನ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರ ಐಶಾರಾಮಿ ಬಂಗಲೆಯನ್ನು ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಟ ಶಾರುಕ್ ಖಾನ್ ಅವರು ಕೃಷಿಕಾರ್ಯಕ್ಕೆ ಭೂಮಿ ಖರೀದಿಸುವುದಾಗಿ ಹೇಳಿ, ಬಳಿಕ ಆ ಭೂಮಿಯನ್ನು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಫಾರ್ಮ್‌ಹೌಸ್ ಆಗಿ ಮಾರ್ಪಡಿಸಿದ್ದಾರೆ ಎನ್ನಲಾಗಿದೆ. ಇದೇ  ಕಾರಣಕ್ಕೆ ಇಂದು ದಾಳಿ ಮಾಡಿರುವ ಅಧಿಕಾರಿಗಳು ಪ್ರಸ್ತುತ ಮುಂಬೈನ ಅಲಿಬಾಗ್ ಪ್ರದೇಶದಲ್ಲಿರುವ ಅದ್ಧೂರಿ ಫಾರ್ಮ್ ಹೌಸ್  ಅನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ತಿಳಿಸಿರುವಂತೆ ದೆಜ ವು ಫಾರ್ಮ್ಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಈ ಫಾರ್ಮ್ ಹೌಸನ್ನು ಬೇನಾಮಿಯಾಗಿ ನೋಂದಣಿ ಮಾಡಲಾಗಿದೆ. ಅಲ್ಲದೆ ಕೃಷಿ ಮಾಡುವುದಾಗಿ ಹೇಳಿ ಭೂಮಿ ಖರೀದಿ  ಮಾಡಿದ್ದ ಶಾರುಕ್ ಖಾನ್ ಐಶಾರಾಮಿ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.
 2004ರಲ್ಲಿ ಶ್ರೀನಿವಾಸ ಪಾರ್ಥಸಾರಥಿ ಹಾಗೂ ಸೋಮಶೇಖರ್ ಸುಂದರೇಶನ್ ಸೇರಿಕೊಂಡು ಈ ದೆಜ ವು ಫಾರ್ಮ್ಸ್ ನಿರ್ಮಿಸಿದ್ದರು. ಬಳಿಕ ಅದೇ ವರ್ಷ ಷೇರು ಪತ್ರಗಳನ್ನು ಶಾರೂಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್  ಹೆಸರಿಗೆ ವರ್ಗಾಯಿಸಲಾಗಿದೆ. ಅದೇ ದಿನ ರಮೇಶ್ ಛಿಬ, ಸವಿತಾ ಛಿಬ ಹಾಗೂ ರಾಜಾರಾಮ್ ಅಜ್‌ಗಾಂವ್‌ ಕರ್ ಅವರನ್ನು ಪ್ರಥಮ ನಿರ್ದೇಶಕರೆಂದು ಹೆಸರಿಸಲಾಗಿತ್ತು. ರಾಜಾರಾಮ್ ತನ್ನನ್ನು ಕೃಷಿಕ ಎಂದು ಹೇಳಿಕೊಂಡಿದ್ದರು  ಎಂದು ತೆರಿಗೆ ಇಲಾಖೆ ತಿಳಿಸಿದೆ. 
ಈ ವ್ಯವಹಾರದಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ಪ್ರಸ್ತುತ ಫಾರ್ಮ್ ಹೌಸ್ ಅನ್ನು ಇಲಾಖೆ ತಾತ್ಕಾಲಿಕ ಜಪ್ತಿ ಮಾಡಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT