ಘಟನಾ ಸ್ಥಳದಲ್ಲಿ ಪೊಲೀಸರು 
ದೇಶ

ಬುರಾರಿ ಸಾವು ಪ್ರಕರಣ: ಸಾವನ್ನಪ್ಪಿದ್ದ 11 ಮಂದಿ ಪೈಕಿ 6 ಜನರ ಸಾವು ಆತ್ಮಹತ್ಯೆ; ಮರಣೋತ್ತರ ವರದಿ

ದೆಹಲಿ.ಯ ಬುರಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ್ದ ಒಂದೇ ಕುಟುಂಬದ 11 ಪೈಕಿ 6 ಮಂದಿಯ ಸಾವು ಆತ್ಮಹತ್ಯೆ ಎಂದು ಮರಣೋತ್ತರ ವರದಿ ಮಾಹಿತಿ ನೀಡಿದೆ...

ನವದೆಹಲಿ; ದೆಹಲಿ.ಯ ಬುರಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ್ದ ಒಂದೇ ಕುಟುಂಬದ 11 ಪೈಕಿ 6 ಮಂದಿಯ ಸಾವು ಆತ್ಮಹತ್ಯೆ ಎಂದು ಮರಣೋತ್ತರ ವರದಿ ಮಾಹಿತಿ ನೀಡಿದೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ 6 ಮಂದಿ ನೇಣು ಬಿಗಿದುಕೊಂಡ ಪರಿಣಾಮ ಸಾವನ್ನಪ್ಪಿದ್ದಾರೆಂದು ವರದಿ ನೀಡಿದೆ. 
ಮೃತರ ದೇಹಗಳ ಮೇಲೆ ಗಾಯದ ಗುರುತುಗಳಿಲ್ಲ: ಪೊಲೀಸರು
ಸಾವನ್ನಪ್ಪಿರುವೋ ಒಂದೇ ಕುಟುಂಬದ 11 ಮಂದಿಯ ಮೃತದೇಹಗಳ ಮೇಲೆ ಯಾವುದೇ ರೀತಿಯ ಗಾಯಗಳ ಗುರುತುಗಳು ಪತ್ತೆಯಾಗಿಲ್ಲ. ಇಬ್ಬರು ಮಕ್ಕಳು ಸೇರಿದಂತೆ 6 ಮಂದಿಯ ಮರಣೋತ್ತರ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮೃತ ದೇಹಗಳ ಮೇಲೆ ಯಾವುದೇ ರೀತಿಯ ಗಾಯಗಳು ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 
ಸಾವುಗಳು ಆತ್ಮಹತ್ಯೆಗಳಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹಗಳಿದ್ದ ಸ್ಥಳದಲ್ಲಿ ಕೆಲ ಪತ್ರಗಳು ಪತ್ತೆಯಾಗಿದ್ದು, ಪತ್ರಗಳಲ್ಲಿರುವ ಅಂಶಗಳನ್ನು ಗಮನಿಸಿದರೆ, ಧಾರ್ಮಿಕ ಆಚರಣೆಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಒಂದೇ ಕುಟುಂಬದ 11 ಜನರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯೊಂದು ಬೆಳಕಿಗೆ ಬಂದಿತ್ತು. 10 ಜನರ ಶವಗಳು ಮನೆಯಲ್ಲಿ ಗಾಳಿ-ಬೆಳಕಿಗಾಗಿ ಬಳಸುವ ಬೆಳಕಿಂಡಿಯ ಕಬ್ಬಿಣದ ಸರಳುಗಳಿಗೆ ನೇತಾಡುತ್ತಿತ್ತು. 77 ವರ್ಷದ ಮಹಿಳೆಯ ಶವ ನೆಲದ ಮೇಲೆ ಬಿದ್ದಿತ್ತು.
ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದರೆ, ಇಬ್ಬರು ಮಕ್ಕಳಿದ್ದರು. ಶವಗಳು ಕಣ್ಣಗೆ ಬಟ್ಟೆ ಕಟ್ಟಿದ, ಬಾಯಿಕೆ ಪಟ್ಟಿ ಹಾಕಿದ ಸ್ಥಿತಿಯಲ್ಲಿದ್ದರೆ, ಮಕ್ಕಳಿಬ್ಬರ ಶವಗಳ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 
ಮೃತರನ್ನು ಭಾಟಿಯಾ ಕುಟುಂಬದ ನಾರಾಯಣ ದೇವಿ (77), ಈಕೆಯ ಮಗಳು ಪ್ರತಿಭಾ (57), ಇಬ್ಬರು ಪುತ್ರರಾದ ಭಾವನೇಶ್ (50), ಲಲಿತ್ ಭಾಟಿಯಾ (45), ಭಾವನೇಶ್ ಪತ್ನಿ ಸವಿತಾ (48), ಈಕೆಯ 3 ಮಕ್ಕಳಾದ ಮೀನು (23), ನಿಧಿ (25) ಹಾಗೂ ಧ್ರುವ (15), ಲಲಿತ್ ಪತ್ನಿ ಟೀನಾ (42), ಈಕೆಯ 15 ವರ್ಷದ ಮಗ ಶಿವಂ, ಪ್ರತಿಭಾಳ ಪುತ್ರಿ ಪ್ರಿಯಾಂಕಾ (33) ಎಂದು ಗುರ್ತಿಸಲಾಗಿದೆ. 
ನಿಗೂಢ ಸಾವು ಪ್ರಕರಣ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಪ್ರಕರಣದಲ್ಲಿ ಹೊರಗಿನವರ ಕೈವಾಡ ಇದೆಯೇ ಅಥವಾ ಇಷ್ಟು ಜನರಲ್ಲಿ ಯಾರಾರೂ ಒಬ್ಬರು ಉಳಿದವರನ್ನು ಕೊಂದು ತಾವು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬೆಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT