ದೇಶ

ಹಿಂದೂ-ಪಾಕಿಸ್ತಾನ ಹೇಳಿಕೆ: ಶಶಿತರೂರ್ ಗೆ ಕೊಲ್ಕೋತಾ ಕೋರ್ಟ್ ಸಮನ್ಸ್

Shilpa D
ಕೊಲ್ಕೊತಾ: ಹಿಂದೂ-ಪಾಕಿಸ್ತಾನ ಹೇಳಿಕೆ ಸಂಬಂಧ ಕೊಲ್ಕೊತಾ ಹೈಕೋರ್ಟ್ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಸಮನ್ಸ್ ನೀಡಿದೆ.
ಕೊಲ್ಕೊತಾ ಮೂಲದ ವಕೀಲ ಸುಮೀತ್ ಚೌಧುರಿ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ತರೂರ್ ಅವರು ತಮ್ಮ ಹೇಳಿಕೆ ಮೂಲಕ ದೇಶದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಘರ್ಷಣೆ ಹಾಗೂ ಸಾಮರಸ್ಯ ಕೊರತೆಯಾಗುತ್ತಿದೆ ಇದರಿಂದ ಧರ್ಮ ಒಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಮತ್ತು 295 ಎ ಅಡಿಯಲ್ಲಿ ದೂರು ದಾಖಲಾಗಿದ್ದು, ಆಗಸ್ಟ್ 14 ರೊಳಗೆ  ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ  ಒಂದು ವೇಳೆ ಬಿಜೆಪಿ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನ ವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. 
SCROLL FOR NEXT