ನರೇಂದ್ರಮೋದಿ, ವೆಂಕಯ್ಯನಾಯ್ಡು 
ದೇಶ

ರಾಜ್ಯಸಭೆಯ ಸದಸ್ಯರು ದೇಶದ 22 ಭಾಷೆಗಳಲ್ಲೂ ಮಾತನಾಡಬಹುದು

ರಾಜ್ಯಸಭೆಯ ಸದಸ್ಯರು ದೇಶದ 22 ಭಾಷೆಗಳಲ್ಲೂ ಮಾತನಾಡಬಹುದು ಎಂದು ಮೇಲ್ಮನೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರಿಂದು ಪ್ರಕಟಿಸಿದರು.

ನವದೆಹಲಿ: ರಾಜ್ಯಸಭೆಯ ಸದಸ್ಯರು  ದೇಶದ 22 ಭಾಷೆಗಳಲ್ಲೂ  ಮಾತನಾಡಬಹುದು ಎಂದು ಮೇಲ್ಮನೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರಿಂದು ಪ್ರಕಟಿಸಿದರು.

 ಡೊಂಗ್ರಿ, ಕಾಶ್ಮಿರಿ, ಕೊಂಕಣಿ, ಸಂತಾಲಿ, ಮತ್ತು ಸಿಂಧಿಯಲ್ಲೂ ವಿಚಾರ ಮಂಡಿಸಬಹುದು ಎಂದು ಮುಂಗಾರು ಅಧಿವೇಶನ ಆರಂಭದ ದಿನವಾದ ಇಂದು ವೆಂಕಯ್ಯನಾಯ್ಡು ರಾಜ್ಯಸಭೆಯಲ್ಲಿ ತಿಳಿಸಿದರು.

ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ,  ಒರಿಯಾ, ಪಂಜಾಬಿ, ತಮಿಳು , ತೆಲುಗು , ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡಬಹುದು. ಈಗ  ಹೆಚ್ಚುವರಿಯಾಗಿ 5 ಭಾಷೆಗಳಲ್ಲೂ ಮಾತನಾಡಬಹುದಾಗಿದೆ .

 ಆದಾಗ್ಯೂ , ಸದಸ್ಯರು ಮಾತನಾಡುವ ಭಾಷೆ ಬಗ್ಗೆ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ.ಆರಂಭದಲ್ಲಿ ಭಾಷಾಂತರಕ್ಕೆ ತೊಡಕಾಗಬಹುದು, ಆದರೂ, ಎಲ್ಲಾ ಸದಸ್ಯರು ತಮ್ಮ ಭಾಷೆಗಳಲ್ಲಿಯೇ ಸಲಹೆ ನೀಡಬಹುದು ಎಂದು ವೆಂಕಯ್ಯನಾಯ್ಡು ಹೇಳಿದರು.

ಇದನ್ನು ಶ್ಲಾಘಿಸಿದ ಬಿಜೆಪಿ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ, ಸಂಸ್ಕೃತ ಸೇರಿಸುವ ಪ್ರಯತ್ನ ಮಾಡುವಂತೆ ಹೇಳಿದರು.

 ಸ್ವಾತಂತ್ಯ ಬಂದ 66  ವರ್ಷಗಳಲ್ಲಿ ಇದೇ ಮೊದಲ ಬಾರಿಗೆ   ರಾಜ್ಯಸಭೆಯು ವಿದೇಶಿ ರಾಷ್ಟ್ರದ ಸಂಸದೀಯ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ತಿಂಗಳ ಆರಂಭದಲ್ಲಿ  ರವಾಂಡಾ ಸೆನೆಟ್ ನಲ್ಲಿ ಇದು ಪ್ರಾರಂಭವಾಗಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.

ಸಂಸದೀಯ ಸಂಭಾಷಣೆ ಮತ್ತು ಇತರರ ಸಂಸದೀಯ ವಿನಿಮಯದ ಭೇಟಿಗಳಿಗೆ  ಒಪ್ಪಂದವು ನೆರವು ಒದಗಿಸುತ್ತದೆ. ಈವರೆಗೆ, ಲೋಕಸಭೆಯು ಕೇವಲ ವಿದೇಶಿ ಸಂಸದೀಯ ಸಂಸ್ಥೆಗಳೊಂದಿಗೆ  ಒಪ್ಪಂದ ಮಾಡಿಕೊಳ್ಳುತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ