ಅಮರನಾಥ ಯಾತ್ರೆ 
ದೇಶ

ಜಮ್ಮು-ಕಾಶ್ಮೀರ: ಮಳೆಯಿಂದಾಗಿ ಬಾಲ್ಟಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ನಿರ್ಬಂಧ

ತೀವ್ರ ಮಳೆಯ ಕಾರಣ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾಲ್ಟಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬಾಲ್ಟಲ್ ಆಕ್ಸಿಸ್ ನಿಂದ ಹೆಲಿಕಾಪ್ಟರ್ ಸೇವೆಯನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ.

ಅನಂತ್ ನಾಗ್ : ತೀವ್ರ ಮಳೆಯ ಕಾರಣ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾಲ್ಟಲ್ ಮಾರ್ಗದಲ್ಲಿ  ಅಮರನಾಥ ಯಾತ್ರೆ ಪ್ರವೇಶವನ್ನು  ನಿರ್ಬಂಧಿಸಲಾಗಿದೆ. ಬಾಲ್ಟಲ್ ಆಕ್ಸಿಸ್ ನಿಂದ  ಹೆಲಿಕಾಪ್ಟರ್ ಸೇವೆಯನ್ನೂ ಕೂಡಾ  ಸ್ಥಗಿತಗೊಳಿಸಲಾಗಿದೆ.

 ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಮಾರ್ಗವೆಲ್ಲಾ ಕೆಸರು ತುಂಬಿಕೊಂಡಿದ್ದು ಜಾರುವಂತಾಗಿದೆ. ಕಲ್ಲು ಸಿಡಿತ ಹಾಗೂ ಭೂ ಕುಸಿತದಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಆದಾಗ್ಯೂ, ಪಾಹಲ್ಗಂ ಮಾರ್ಗದ ಕಡೆಯಿಂದ ಯಾತ್ರೆಯನ್ನು ಮುಂದುವರೆಸಲಾಗಿದೆ.
 ಇದೇ ರೀತಿಯ ಮಳೆಯ ಕಾರಣದಿಂದಾಗಿ ಈ ಹಿಂದೆ ಜೂನ್ 30 ರಂದು ಬಾಲ್ಟಲ್ ಹಾಗೂ ಪಾಹಲ್ಗಂ ಮಾರ್ಗದಲ್ಲಿಯೂ  ಅಮರನಾಥ ಯಾತ್ರೆಯನ್ನು ನಿಷೇಧಿಸಲಾಗಿತ್ತು. ಮಳೆಯ ಕಾರಣ ಜೂನ್ 27ರಿಂದ ಬಾಲ್ಟಲ್ ಮಾರ್ಗದಲ್ಲಿ ಯಾತ್ರೆಯನ್ನು ನಿಲ್ಲಿಸಲಾಗಿತ್ತು.
ಅಮರನಾಥ ಯಾತ್ರೆಯ ಯಾತ್ರಾರ್ಥಿಗಳನ್ನೊಳಗೊಂಡ ಮೊದಲ ತಂಡ ಜೂನ್ 27 ರಿಂದ ಪ್ರಯಾಣ ಬೆಳೆಸಿತ್ತು. ಆದರೆ, ಮಳೆಯ ಕಾರಣ ಅಂದೇ ಯಾತ್ರೆ ಸ್ಥಗಿತಗೊಂಡಿತ್ತು.
ಆದಾಗ್ಯೂ, ಯಾತ್ರಾರ್ಥಿಗಳು ಕೆಲಕಾಲ ಯಾತ್ರೆಯನ್ನು ಸ್ಥಗಿತಗೊಳಿಸಿದ್ದರೂ ನಂತರ ಬಾಲ್ಟಲ್ ವಾಯುನೆಲೆಯಿಂದ  ಪ್ರಯಾಣ ಬೆಳೆಸಿದ್ದರು.
ಈ ಮಾರ್ಗದಲ್ಲಿ ಜು.4 ರಂದು ಭೂ ಕುಸಿತ ಸಂಭವಿಸಿ ಐವರು ಯಾತ್ರಾರ್ಥಿಗಳು ಮೃತಪಟ್ಟು, ಮೂವರು ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT