ದೇಶ

ಬಿಜೆಪಿ ಶಾಸಕಿ ಪ್ರವೇಶಿಸಿದ ದೇವಸ್ಥಾನ ಗಂಗಾಜಲದಿಂದ ಶುದ್ಧೀಕರಣ!

Shilpa D
ಉತ್ತರ ಪ್ರದೇಶ: ಬಿಜೆಪಿ ಶಾಸಕಿಯೊಬ್ಬರು ಪ್ರವೇಶಿಸಿದ್ದ ದೇವಾಸ್ಥಾನ ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇವಾಸ್ಥಾನವನ್ನು ಗಂಗಾಜಲದಿಂದ ಶುದ್ದೀಕರಣ ಮಾಡಿದ ಘಟನೆ ನಡೆದಿದೆ.
ಜುಲೈ12 ರಂದು ಬಿಜೆಪಿ ಶಾಸಕಿ ಮನಿಷಾ ಅನುರಾಗಿ  ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವನ್ನು ಮುಗಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇದುವರೆಗೂ ಯಾವೊಬ್ಬ ಮಹಿಳೆಯೂ ದೇವಸ್ಥಾನವನ್ನು ಪ್ರವೇಶಿಸಿಲ್ಲ. ಇಲ್ಲಿ ಮಹಿಳೆಯ ಪ್ರವೇಶಕ್ಕೆ ಅನುಮತಿಯಿಲ್ಲ. ಶಾಸಕಿ ಮನೀಶಾ ಅನುರಾಗಿ ಅವರು ದೇವಸ್ಥಾನದ ಆವರಣದೊಳಗೆ ಪ್ರವೇಶ ಮಾಡಿದ ದಿನ ನಾನು ಅಲ್ಲಿ ಇರಲಿಲ್ಲ. ನಾನೇನಾದರೂ ಅಲ್ಲಿದ್ದರೆ, ಪ್ರವೇಶಿಸಲು ಬಿಡುತ್ತಿರಲಿಲ್ಲ ಎಂದು ದೇವಸ್ಥಾನದ ಅರ್ಚಕರೊಬ್ಬರು ತಿಳಿಸಿದ್ದಾರೆ.
ಈ ರೀತಿ ಮಾಡುವುದರಿಂದ ಮಹಿಳೆಯರಿಗೆ ಅಪಮಾನ ಮಾಡಿದ್ದಂತೆ. ಅಲ್ಫ ಬುದ್ಧಿಯ ಜನರು ಮಾತ್ರ ಈ ರೀತಿ ಮಾಡುತ್ತಾರೆ ಎಂದು ಶಾಸಕಿ  ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಹಾಭಾರತ ಕಾಲದಿಂದಲೂ ಇರುವುದಾಗಿ ಜನರು ನಂಬಿದ್ದು, ಅಂದಿನಿಂದ ಮಹಿಳೆಯರಿಗೆ ಪ್ರವೇಶವಿಲ್ಲ. ಅವರು ಹೊರಗಡೆ ನಿಂತು ಪ್ರಾರ್ಥಿಸಬಹುದಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
SCROLL FOR NEXT