ದೇಶ

ಇನ್ನೆರಡೇ ವಾರದಲ್ಲಿ ಹಸೆಮಣೆ ಏರಬೇಕಿದ್ದ ಭಾರತೀಯ ಯೋಧ, ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಹುತಾತ್ಮ!

Vishwanath S
ನವದೆಹಲಿ: ಎರಡು ವಾರಗಳಲ್ಲಿ ಮದುವೆಯಾಗಿ ಸುಖ ಸಂಸಾರ ನಡೆಸಿಬೇಕಿದ್ದ ಯೋಧನೋರ್ವ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. 
ಉತ್ತರ ಪ್ರದೇಶದ ಪತ್ತೇಪುರ್ ಮೂಲದ ವಿಜಯ್ ಕುಮಾರ್ ಪಾಂಡೆ ಅವರು ಇದೇ ಜೂನ್ 20ಕ್ಕೆ ಹಸೆಮಣೆ ಹೇರಬೇಕಿತ್ತು. ಹೀಗಾಗಿ ಜೂನ್ 5ಕ್ಕೆ ಸ್ವಗ್ರಾಮಕ್ಕೆ ಮರಳುವುದಾಗಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿಜಯ್ ಕುಮಾರ್ ತಂದಗೆ ಕರೆ ಮಾಡಿ ತಿಳಿಸಿದ್ದರು. ಆದರೆ ನಿನ್ನೆ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. 
ವಿಜಯ್ ಕುಮಾರ್ ಸಹೇಪುರ್ ಗ್ರಾಮದ ಆದರ್ಶ್ ಇಂಟರ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ವಿಜಯ್ ಉತ್ತಮ ವಿದ್ಯಾರ್ಥಿಯಾಗಿದ್ದ ಜತೆಗೆ ದೇಶ ಸೇವೆ ಮಾಡಬೇಕೆಂದ ಕನಸ್ಸನ್ನು ಇಟ್ಟುಕೊಂಡಿದ್ದ ಎಂದು ಶಾಲೆಯ ಶಿಕ್ಷಕರು ನೋವಿನಿಂದ ಹೇಳಿದ್ದಾರೆ.
SCROLL FOR NEXT