ದೇಶ

ತಮ್ಮ ವಿರುದ್ಧ ಅಸಹ್ಯಕರ, ದುರುದ್ದೇಶಪೂರಿತ ಪ್ರಕರಣ : ನ್ಯಾಯಾಲಯದ ಸಮನ್ಸ್ ಬಗ್ಗೆ ಶಶಿ ತರೂರ್ ಹೇಳಿಕೆ

Nagaraja AB

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 7 ರಂದು  ವಿಚಾರಣೆಗೆ  ಹಾಜರಾಗುವಂತೆ ಕಾಂಗ್ರೆಸ್  ಸಂಸದ ಶಶಿ ತರೂರ್ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

 ಈ ಸಮನ್ಸ್ ಕುರಿತಂತೆ ಲಿಖಿತ ಹೇಳಿಕೆ ನೀಡಿರುವ  ಶಶಿ ತರೂರ್,  ತಮ್ಮ ವಿರುದ್ಧ  ಅಸಹ್ಯಕರ, ದುರುದ್ದೇಶಪೂರಿತ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.  

ಇದರ ವಿರುದ್ಧ  ತೀವ್ರವಾಗಿ ಹೋರಾಟ ನಡೆಸುತ್ತೇನೆ.  ನ್ಯಾಯಾಂಗ ವ್ಯವಸ್ಥೆ ಮೂಲಕ ಸತ್ಯ ಹೊರಬಂದು  ತಮ್ಮ ಮೇಲಿನ ಆಪಾದನೆಗಳೆಲ್ಲಾ ಸುಳ್ಳು ಎಂಬುದನ್ನು ಸಾಬೀತುಪಡಿಸುತ್ತೇನೆ.  ಇದಕ್ಕೆ ನಮ್ಮ ದೇಶದಲ್ಲಿ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಶಶಿ ತರೂರ್ ಅವರು ಸುನಂದಾರನ್ನು 2010ರಲ್ಲಿ ಮದುವೆಯಾಗಿದ್ದರು. ಸುನಂದಾ ಪುಷ್ಕರ್ ಅವರು 2014 ಜನವರಿ 17ರಂದು ದೆಹಲಿಯ ಹೊಟೇಲೊಂದರ ಕೊಠಡಿಯೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.





SCROLL FOR NEXT