ದೇಶ

ಅಂಬೇಡ್ಕರ್ ಅವರ ಅನುಯಾಯಿಗಳು ನಕ್ಸಲರಾಗಲು ಸಾಧ್ಯವಿಲ್ಲ: ಕೇಂದ್ರ ಸಚಿವ

Srinivas Rao BV
ನವದೆಹಲಿ: ಅಂಬೇಡ್ಕರ್ ಅನುಯಾಯಿಗಳು ನಕ್ಸಲರಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಕ್ಸಲರು ಸಂಚು ರೂಪಿಸಿರುವ ಬಗ್ಗೆ ಪ್ರಕಟವಾದ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ರಾಮ್ ದಾಸ್ ಅಠಾವಳೆ,  ಮೋದಿ ಹತ್ಯೆಗೆ ಸಂಚು ರೂಪಿಸಿದ್ದರ ವರದಿಯಲ್ಲಿ ಪ್ರಸ್ತಾಪವಾಗಿರುವ ಎಲ್ಗಾರ್ ಪರಿಷತ್ ಹಾಗೂ ಇತ್ತೀಚೆಗಷ್ಟೇ ನಡೆದ ಭೀಮ ಕೊರೆಗಾಂವ್ ಹಿಂಸಾಚಾರಕ್ಕೂ ನಕ್ಸಲರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 
ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ನಲ್ಲಿ ಹಲವು ದಲಿತ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರಧಾನಿಯ ಹತ್ಯೆಗೆ ಸಂಚು ರೂಪಿಸಿರುವ ಸಮಾಜಘಾತುಕ, ರಾಷ್ಟ್ರವಿರೋಧಿಗಳನ್ನು ಖಂಡಿಸುತ್ತೇವೆ ಎಂದು ಅಠಾವಳೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಂತ್ರದೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ, ಅವರು ಕೇವಲ ಒಂದು ಧರ್ಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂಬ ಆರೋಪ ತಪ್ಪು ಎಂದು ಅಠಾವಳೆ ತಿಳಿಸಿದ್ದಾರೆ. 
SCROLL FOR NEXT