ದೇಶ

ಜಾರ್ಖಂಡ್‌: ಜಾನುವಾರು ಕಳ್ಳತನ ಶಂಕೆ, ಗೋ ರಕ್ಷಕರಿಂದ ಇಬ್ಬರ ಹತ್ಯೆ

Lingaraj Badiger
ಜಾರ್ಖಂಡ್‌: ಜಾನುವಾರು ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋರಕ್ಷಕರು ಇಬ್ಬರನ್ನು ಚಚ್ಚಿ ಸಾಯಿಸಿರುವ ಘಟನೆ ಜಾರ್ಖಂಡ್ ನ‌ ಸಂತಾಲ್‌ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಡಿಯೋದಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತೆ ಕಿರಣ್ ಕುಮಾರಿ ಪಸಿ ಅವರು ತಿಳಿಸಿದ್ದಾರೆ.
ಹತ್ಯೆಗೀಡಾಗಿದವರನ್ನು ಮುರ್ತಜಾ ಅನ್ಸಾರಿ ಮತ್ತು ಚಾರ್ಕು ಅನ್ಸಾರಿ ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಇನ್ನೂ ಮೂವರು ಹೇಗೋ ತಪ್ಪಿಸಿಕೊಂಡು ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿಲಾಗಿದ್ದು, ಗ್ರಾಮದಲ್ಲಿ ಘಟನೆ ನಡೆದ ಸಂತಾಲ್‌ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ ಎಂದು ಪಸಿ ಹೇಳಿದ್ದಾರೆ.
ಜಾರ್ಖಂಡ್ ನ‌ಲ್ಲಿ ಮೊತ್ತ ಮೊದಲ ಬಾರಿಗೆ ಗೋರಕ್ಷಕರಿಗೆ ಶಿಕ್ಷೆ ವಿಧಿಸಲ್ಪಟ್ಟ  ಆಲಿಮುದ್ದೀನ್‌ ಅನ್ಸಾರಿ ಕೇಸನ್ನು ರಾಂಚಿಯ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಇತ್ಯರ್ಥಪಡಿಸಿದ ಮೂರು ತಿಂಗಳ ತರುವಾಯ ಗೋರಕ್ಷಕರಿಂದ ನಡೆದಿರುವ ಇನ್ನೊಂದು ಕೊಲೆ ಕೃತ್ಯ ಇದಾಗಿದೆ. 
SCROLL FOR NEXT