ಕೊಚ್ಚಿ: ಸರಕು ಸಾಗಣೆ ಹಡಗು ಬೆಂಕಿಗಾಹುತಿ: 22 ಸಿಬ್ಬಂದಿ ಅಪಾಯದಿಂದ ಪಾರು 
ದೇಶ

ಕೊಚ್ಚಿ: ಸರಕು ಸಾಗಣೆ ಹಡಗು ಬೆಂಕಿಗಾಹುತಿ: 22 ಸಿಬ್ಬಂದಿ ಅಪಾಯದಿಂದ ಪಾರು

ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಸ್ಥಳೀಯ ಸರಕು ಸಾಗಣೆ ಹಡಗೊಂದು ಬೆಂಕಿ ಅವಘಡಕ್ಕೆ ಈಡಾಗ ಘಟನೆ ಕೇರಳದ ಕೊಚ್ಚಿ ಸಮೀಪ ನಡೆದಿದೆ.

ಕೊಚ್ಚಿ(ಕೇರಳ): ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಸ್ಥಳೀಯ ಸರಕು ಸಾಗಣೆ ಹಡಗೊಂದು ಬೆಂಕಿ ಅವಘಡಕ್ಕೆ ಈಡಾದ ಘಟನೆ ಕೇರಳದ ಕೊಚ್ಚಿ ಸಮೀಪ ನಡೆದಿದೆ.
ಬೆಂಕಿ ಅವಘಡಕ್ಕೀಡಾದ ಹಡಗಿನಲ್ಲಿ ಸಿಬ್ಬಂದಿಗಳು ಸೇರಿ 22 ಮಂದಿ ಇದ್ದುದಾಗಿ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆ ಯೋಧರು ಅವಘಡಕ್ಕೀಡಾದ ಹಡಗಿನತ್ತ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಎಲ್ಲಾ 22 ಜನರನ್ನೂ ರಕ್ಷಿಸಲಾಗಿದೆ.
ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್‌ ಅನ್ನು ಹೊತ್ತೊಯ್ಯುತ್ತಿದ್ದ  ಹಡಗಿನಲ್ಲಿ ಕಳೆದ ರಾತ್ರಿ ಸ್ಪೋಟದೊಡನೆ ಬೆಂಕಿ ಕಾಣಿಸಿದೆ. ಹೀಗೆ ಬೆಂಕಿ ಅವಘಡಕ್ಕೀಡಾದ ಮೂರು ತಾಸಿನಲ್ಲಿ ರಕ್ಷಣಾ ಪಡೆ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಸಧ್ಯ ಯಾವ್ಚ ಜೀವಹಾನಿ ಸಂಭವಿಸಲಿಲ್ಲ.
ಸಮುದ್ರದ ಭಾಗದಲ್ಲಿದ್ದ ಬಲವಾದ ಗಾಳಿಯ ಕಾರಣ ಬೆಂಕಿಯು ಬೇಗನೇ ಹರಡಿದ್ದು ಹಡಗಿನ ಶೇ.70 ಭಾಗ ಸುಟ್ಟು ಹೋಗಿದೆ ಎಂದು ಮೂಲಗಳು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT